Advertisement

ಉತ್ತರಾಖಂಡದಲ್ಲಿ ಮತ್ತೊಂದು ಹೆಲಿಕಾಪ್ಟರ್‌ ಅವಘಡ ;ಪೈಲಟ್‌, ಸಹ ಪೈಲಟ್‌ ಅಪಾಯದಿಂದ ಪಾರು

10:01 AM Aug 24, 2019 | Team Udayavani |

ಹೊಸದಿಲ್ಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಂತ್ರಸ್ತರಿಗೆ ವಸ್ತುಗಳನ್ನು ಸಾಗಿಸುತ್ತಿದ್ದ ಹೆಲಿಕಾಪ್ಟರೊಂದು ಏಕಾಏಕಿ ಧರೆಗಿಳಿದು ಕೂತಿದೆ.

Advertisement

ಘಟನೆಯಲ್ಲಿ ಯಾರಿಗೂ ಅಪಾಯಗಳಾಗಿಲ್ಲ. ಹೆಲಿಕಾಪ್ಟರ್‌ಗೂ ಹೆಚ್ಚು ಹಾನಿಯಾಗಿಲ್ಲ. ನಿನ್ನೆಯಷ್ಟೇ ಇದೇ ಪ್ರದೇಶದಲ್ಲಿ ಪ್ರವಾಹ ಸಂತ್ರಸ್ತರಿಗೆ ವಸ್ತು ಸಾಗಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿತ್ತು. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು.

ಉತ್ತರಕಾಶಿಯಲ್ಲಿ ಮೊನ್ನೆಯ ಮೇಘಸ್ಫೋಟದಲ್ಲಿ 80-100 ಮಂದಿ ಮೃತಪಟ್ಟಿದ್ದು ಕೋಟ್ಯಂತರ ರೂ. ಆಸ್ತಿ ಪಾಸ್ತಿ ಹಾನಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next