Advertisement

Sandalwood: ಹೊಸಬರ ಚಿತ್ರ ‘ಎಣ್ಣೆ ಪಾರ್ಟಿ’

05:13 PM Jun 22, 2024 | Team Udayavani |

“ಎಣ್ಣೆ ಪಾರ್ಟಿ’ ಹೀಗೊಂದು ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಕಾಮನ್‌ ಮ್ಯಾನ್‌ ಪ್ರೊಡಕ್ಷನ್‌ ಅಡಿಯಲ್ಲಿ ಪ್ರದೀಪ್‌ ಕುಮಾರ್‌.ಕೆ ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿನ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಧನಂಜಯ್‌ ನಾಗರಾಜ್‌ ಕೆಲಸವನ್ನು ಮೆಚ್ಚಿದ ನಿರ್ದೇಶಕ ಭರತ್‌.ಎಲ್‌ ಈ ಬಾರಿ ತಮ್ಮೊಂದಿಗೆ ಆ್ಯಕ್ಷನ್‌ ಕಟ್‌ ಹೇಳಲು ಸೇರಿಸಿಕೊಂಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ತಂಡ, “ಪ್ರೀತಿ ಎನ್ನುವುದು ವಿಶ್ವದಾದ್ಯಂತ ಇರುತ್ತದೆ. ನಾಲ್ಕು ಯುವ ಜೋಡಿಗಳ ಸುತ್ತ ಕಥೆಯು ಸಾಗುತ್ತದೆ. ಶ್ರೀಮಂತರು, ಬಡವರು ಎಣ್ಣೆಯನ್ನು ಕುಡಿತಾರೆ. ಆದರೆ ಒಳಗಡೆ ಹೋದಾಗ ಅವರುಗಳು ಯಾವ ರೀತಿ ವರ್ತಿಸುತ್ತಾರೆ. ಕುಡಿತ ಒಳ್ಳೇದು, ಕೆಟ್ಟದು ಅಂತ ವಿಶ್ಲೇಷಿಸದೆ, ಮಿತಿಯೊಳಗೆ ಸೇವಿಸಿದರೆ ಅನಾಹುತ ಸಂಭವಿಸುದಿಲ್ಲ. ಮೀರಿದರೆ ಏನಾಗುತ್ತದೆ ಎನ್ನುವಂತಹ ಅಂಶಗಳನ್ನು ಹೆಕ್ಕಿಕೊಂಡು ಮನರಂಜನೆ, ಹಾಸ್ಯ, ಥ್ರಿಲ್ಲರ್‌ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಕುಡಿಯೊದೇ ಜೀವನ ಅಂತ ಕೆಲವರ ನಂಬಿಕೆ. ಕುಡಿತದಲ್ಲಿ ಬದುಕು ಇರುತ್ತದೆ ಎಂಬ ಸಂದೇಶವನ್ನು ಹೇಳಲಾಗುತ್ತಿದೆ. ಶೀರ್ಷಿಕೆ ಇಟ್ಟುಕೊಂಡು ಅದಕ್ಕೆ ಹೊಂದುವಂತಹ ಕಥೆಯನ್ನು ಸಿದ್ಧಪಡಿಸಲಾಗಿದೆಯಂತೆ.

ಹೊಸ ಪ್ರತಿಭೆಗಳಾದ ಶೋಭನ್‌, ಸಂತೋಷ್‌, ಪ್ರೀತಿ, ಮಂಜುಳಾ, ವರುಣ್‌, ಮಂಜು ಸುವರ್ಣ, ರಾಮು ಕೊನ್ನಾರ್‌, ಅಪ್ಪು ರಾಜ್, ರಶ್ಮಿ, ಗ್ರೀಷ್ಮಾ, ದಿವ್ಯಾ, ವೈಶಾಖ ಇನ್ನಿತರರು ತಾರಾಬಳಗದಲ್ಲಿ ಇದ್ದಾರೆ. ನಾಲ್ಕು ಎಣ್ಣೆ ಹಾಡುಗಳಿಗೆ ಆಕಾಶ್‌ ಪರ್ವ ಸಂಗೀತ, ರಾಜ್‌ ಕಾಂತ್‌ ಛಾಯಾಗ್ರಹಣ ಇರಲಿದೆ. ಬೆಂಗಳೂರು ಸುತ್ತಮುತ್ತ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next