Advertisement

ಎಣ್ಣೆಹೊಳೆ: ಭರದಿಂದ ನಡೆಯುತ್ತಿದೆ ಏತ ನೀರಾವರಿ ಕಾಮಗಾರಿ

12:35 AM Mar 20, 2020 | Sriram |

ಅಜೆಕಾರು: ಸ್ವರ್ಣಾ ನದಿಗೆ ಎಣ್ಣೆಹೊಳೆಯಲ್ಲಿ ಅಣೆಕಟ್ಟು ನಿರ್ಮಿಸಿ ಕೃಷಿ ಭೂಮಿಗೆ ನೀರು ಹಾಯಿ ಸುವ ಬೃಹತ್‌ ಏತ ನೀರಾವರಿ ಯೋಜನೆಯ ಕಾಮಗಾರಿ ಭರದಿಂದ ನಡೆಯುತ್ತಿದೆ.

Advertisement

ಈಗಾಗಲೇ ಪಿಲ್ಲರ್‌ ಕಾಮಗಾರಿ ಅಂತಿಮ ಹಂತದಲ್ಲಿದ್ದು ಮಳೆಗಾಲ ಆರಂಭವಾಗುವ ಮೊದಲು ಅಣೆಕಟ್ಟಿನ ಕಾಮಗಾರಿ ಪೂರ್ಣ ಗೊಳ್ಳಬೇಕಾಗಿರು ವುದರಿಂದ ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಮಳೆಗಾಲದಲ್ಲಿ ಸ್ವರ್ಣಾ ನದಿ ತುಂಬಿ ಹರಿಯುವುದರಿಂದ ಯಾವುದೇ ರೀತಿಯ ಕಾಮಗಾರಿ ನಡೆಸುವುದು ಅಸಾಧ್ಯವಾಗುತ್ತದೆ. ಈ ನೀರಾವರಿ ಯೋಜನೆಯಿಂದ ಹಿರ್ಗಾನ, ಮರ್ಣೆ, ಯರ್ಲಪಾಡಿ, ಕುಕ್ಕುಂದೂರು ಗ್ರಾಮ ಪಂಚಾಯತ್‌ ಹಾಗೂ ಕಾರ್ಕಳ ಪುರಸಭೆ ವ್ಯಾಪ್ತಿಗೆ ನೀರು ಒದಗಿಸಲಾಗುತ್ತದೆ. ವಿವಿಧೆಡೆ 40 ಕಿಂಡಿ ಅಣೆಕಟ್ಟು ನಿರ್ಮಿಸಿ ಪಂಪ್‌ ಮೂಲಕ ನೀರು ಹಾಯಿಸಲಾಗುತ್ತದೆ. ಅಲ್ಲದೆ ಒವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಿ ಕುಡಿಯುವ ನೀರು ಒದಗಿಸುವ ಯೋಜನೆ ಏತ ನೀರಾವರಿಯಲ್ಲಿದೆ.

ಸುಮಾರು 1,500 ಹೆಕ್ಟೇರ್‌ ಕೃಷಿ ಭೂಮಿಗೆ ಮುಂದಿನ ವರ್ಷ ನೀರು ಪೂರೈಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next