Advertisement

ದುರಂತದ ಬೆನ್ನಲ್ಲೇ ತೂಗು ಸೇತುವೆ ಮೇಲೆ ಕಾರು ; ಪ್ರವಾಸಿಗರ ಹುಚ್ಚಾಟ

05:58 PM Nov 02, 2022 | Team Udayavani |

ಜೋಯಿಡಾ : ಜನರ ನೂಕುನುಗ್ಗಲಿನಿಂದಾಗಿ ಗುಜರಾತ್‌ನಲ್ಲಿ ಕೇಬಲ್ ಸೇತುವೆಯೊಂದು ಮುರಿದು ಘೋರ ಅವಘಡ ನಡೆದ ಬೆನ್ನಲ್ಲೇ ಪ್ರವಾಸಿಗರು ಉತ್ತರಕನ್ನಡದ ಜೋಯಿಡಾ ತಾಲೂಕಿನ ಉಳವಿ ಗ್ರಾಪಂ ಗುಂದ ಅರಣ್ಯ ಇಲಾಖೆ ವ್ಯಾಪ್ತಿಯ ಶಿವಪುರದ ತೂಗು ಸೇತುವೆಯ ಮೇಲೆ ಕಾರನ್ನು ಓಡಿಸಿ ಅಪಾಯಕ್ಕೆ ಆಹ್ವಾನ ನೀಡಿದ್ದಾರೆ.

Advertisement

ಮಹಾರಾಷ್ಟ್ರದ ಕೆಲವು ಪ್ರವಾಸಿಗರು  ಜನಪ್ರಿಯ ಪ್ರವಾಸಿ ತಾಣವಾದ ಶಿವಪುರ ತೂಗು ಸೇತುವೆಗೆ ಭೇಟಿ ನೀಡಿದ್ದರು ಮತ್ತು ಸೇತುವೆಯ ಮೇಲೆ ತಮ್ಮ ಮಾರುತಿ ಸುಜುಕಿ 800 ಕಾರನ್ನು ಓಡಿಸಿದ್ದಾರೆ.

ಸ್ಥಳೀಯರು ಶೀಘ್ರದಲ್ಲೇ ಪ್ರವಾಸಿಗರ ಹುಚ್ಚಾಟವನ್ನು ವಿರೋಧಿಸಿದ್ದು, ಕಿರಿದಾದ ತೂಗು ಸೇತುವೆಗೆ ಕಾರಿನ ತೂಕವು ಪರಿಣಾಮ ಬೀರಬಹುದು ಎಂದು ಹೇಳಿ ತಕ್ಷಣವೇ ಕಾರನ್ನು ಹಿಂದಕ್ಕೆ ಚಲಿಸುವಂತೆ ಒತ್ತಾಯಿಸಿದರು.

ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next