Advertisement

ಯಲ್ಲಾಪುರ : ಬಿರುಗಾಳಿ ಸಹಿತ ಭಾರಿ ಮಳೆಗೆ ನೂರಾರು ಅಡಿಕೆ ಮರಗಳು ಧರೆಗೆ, ಅಪಾರ ನಷ್ಟ

07:34 AM Sep 03, 2022 | Team Udayavani |

ಯಲ್ಲಾಪುರ : ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಬಿರುಗಾಳಿ ಸಹಿತ ಗುಡುಗು , ಮಿಂಚು, ಸಿಡಿಲಿನೊಂದಿಗೆ ಸುರಿದ ಭಾರೀ ಮಳೆಗೆ ವ್ಯಾಪಕ ಹಾನಿ ಸಂಭವಿಸಿದೆ.

Advertisement

ಮಾವಿನಮನೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೇರಾಳ ಮಜರೆಯ ರೈತರಾದ ಜಗದೀಶ್ ಶಂಕರ್ ಭಟ್ ಮತ್ತು ಸುಬ್ರಾಯ ತಿಮ್ಮಯ ಭಟ್ ಅವರಿಗೆ ಸೇರಿದ ಅಡಿಕೆ ತೋಟಗಳು ಒಂದು ಎಕರೆಗೂ ಮೇಲ್ಪಟ್ಟು ಅಡಿಕೆ ಮರಗಳು ಧರೆಗುರುಳಿವೆ. ಜೊತೆಗೆ ಹತ್ತಕ್ಕೂ ಹೆಚ್ಚು ಫಲಭರಿತ ತೆಂಗಿನ ಮರಗಳು ಮುರಿದು ಬಿದ್ದಿವೆ. ಮತ್ತೂ ತಿಮ್ಮಣ್ಣ ಗೋಪಾಲ ಭಟ್ ಅವರ ತೋಟವೂ ಸಹಿತ ಅಂದಾಜು ಒಂದು ಎಕರೆಯಷ್ಟು ಅಡಿಕೆ ಗಿಡಗಳಿಗೆ ಹಾನಿ ಆಗಿವೆ. ಅದರಂತೆ ಗಣಪತಿ ತಿಮ್ಮಯ್ಯ ಭಟ್ ರವರ ಮನೆಯ ಮೇಲ್ಚಾವಣಿಗೆ ಹೊದಿಸಿದ ನೂರಾರು ಹೆಂಚುಗಳು, ಸಿಮೆಂಟ್ ಶೀಟುಗಳು ಹಾರಿ ಹೋಗಿದ್ದು ಅಡಿಕೆ ತೋಟವೂ ಸಹಿತ ಭಾಗಶಃ ಹಾನಿಗೊಳಗಾಗಿದೆ.

ಘಟನೆ ನಡೆದ ಸ್ಥಳಕ್ಕೆ ಕಂದಾಯ ಇಲಾಖೆಯಿಂದ ಗ್ರಾಮ ಲೆಕ್ಕಾಧಿಕಾರಿಗಳಾದ ಈಶ್ವರ ಪಟಗಾರ ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ.

ಮಾವಿನಮನೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಕಳಿ ಹಾನಿಯಾದ ರೈತರ ಮನೆಗೆ ತೆರಳಿ ಹಾನಿಗೊಳಗಾದ ತೋಟವನ್ನು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next