Advertisement

Yellapur ವ್ಯಾಘ್ರನ ಅಟ್ಟಹಾಸ: ಕರು ತಿಂದ ಹುಲಿ, ಆತಂಕದಲ್ಲಿ ಗ್ರಾಮಸ್ಥರು

12:03 PM Jun 28, 2023 | Team Udayavani |

ಯಲ್ಲಾಪುರ: ಯಲ್ಲಾಪುರದ ಭಾಗದಲ್ಲಿ ಮತ್ತೆ ಹುಲಿಯ ಅಟ್ಟಹಾಸ ಶುರುವಾಗಿದೆ. ತಾಲೂಕಿನ ಮಾಗೋಡ ಭಾಗದಲ್ಲಿ ಕೆಲ ತಿಂಗಳಿನ ನಂತರ ಮತ್ತೆ ಹುಲಿರಾಯ ಕೊಟ್ಟಿಗೆಯೊಳಗೆ ನುಗ್ಗಿ ಹಸುವಿನ ಕರುವನ್ನು ತಿಂದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ಹೆಬ್ಬಾರಮನೆ ನಾಗೇಶ‌ ಗೋಪಾಲ ಭಾಗ್ವತ ಎಂಬವರ ಕೊಟ್ಟಿಗೆಯಲ್ಲಿ ಹುಲಿ ತನ್ನ ಕ್ರೂರ ಕೃತಗಯವನ್ನು ಎಸಗಿದೆ. ಒಂದು ಗಂಟೆ ನಂತರ ನಡೆದಿರಬಹುದೆಂದು ಅಂದಾಜಿಸಲಾಗಿದೆ .ತಾಯಿ ಮತ್ತು ಕರು ಎರಡು ಇದ್ದ ಕೊಟ್ಟಿಗೆ ಯಲ್ಲಿ ಕರುವನ್ನು ಹುಲಿ ಕೊಂದು ಹಾಕಿದೆ .ಕರುಳನ್ನು ಬಗೆದು ಬೇರ್ಪಡಿಸಿ ಹಾಕಿದೆ .ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ.

ಇದೇ ತರಹ ಕೆಲ ತಿಂಗಳ ಹಿಂದೆ ಈ ಭಾಗದ ಹಲವರ ಕೊಟ್ಟಿಗೆಯಲ್ಲಿ ನಡೆದಿತ್ತು.ಇಂತಹ ಘಟನೆ ಪದೇ ಪದೇ ಮರುಕಳಿಸುತ್ತಿದ್ದು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next