Advertisement

B. S. Yediyurappa: ಮತ್ತೆ ಶಕ್ತಿ ಕೇಂದ್ರವಾದ ಯಡಿಯೂರಪ್ಪ ನಿವಾಸ

10:56 PM Mar 14, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಸನ್ನಿಹಿತವಾದಂತೆ ಕೇಂದ್ರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸ “ಧವಳಿಗಿರಿ’ಯು ಬಿಜೆಪಿ ಪಾಲಿಗೆ ಮತ್ತೆ ರಾಜಕೀಯ ಶಕ್ತಿ ಕೇಂದ್ರವಾಗಿ ಪರಿಣಮಿಸಿದೆ.

Advertisement

ಮೂರ್‍ನಾಲ್ಕು ದಿನಗಳಿಂದ ಬಿಎಸ್‌ವೈ ನಿವಾಸಕ್ಕೆ ಎಡ ತಾಕುತ್ತಿರುವ ಬಿಜೆಪಿ ಮುಖಂಡರು, ಟಿಕೆಟ್‌ ಸಿಗುವ ಮುನ್ನ

ಒಂದು ರೀತಿಯಾದರೆ, ಟಿಕೆಟ್‌ ಸಿಕ್ಕಿದ ಬಳಿಕ ಮತ್ತೂಂದು ರೀತಿಯಲ್ಲಿ ಎಡತಾಕುತ್ತಲೇ ಇದ್ದಾರೆ. ಟಿಕೆಟ್‌ ಘೋಷಣೆ ಬಳಿಕ ಬುಧವಾರ ರಾತ್ರಿ ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿ ಡಾ| ಮಂಜುನಾಥ್‌ ಅವರು ಬಿಎಸ್‌ವೈ ನಿವಾಸಕ್ಕೆ ಭೇಟಿ ನೀಡಿದರೆ, ಗುರುವಾರ ಮೈಸೂರು ಕ್ಷೇತ್ರದ ಅಭ್ಯರ್ಥಿ ಯದುವೀರ್‌ ಒಡೆಯರ್‌, ಹಾವೇರಿ

ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದರು.  ಚಾಮರಾಜನಗರದಿಂದ ಟಿಕೆಟ್‌ಘೋಷಣೆ

ಯಾಗಿರುವ ಬಾಲರಾಜು ಅವರು ಯಡಿಯೂರಪ್ಪ ಅವರ ಕಾಲಿಗೆರಗಿ ಕೃತಜ್ಞತೆ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next