Advertisement

ಸ್ವಾಮೀಜಿಗಳ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು: ವಿಜಯಾನಂದ ಕಾಶಪ್ಪನವರ್

12:51 PM Sep 19, 2021 | Team Udayavani |

ಕೊಪ್ಪಳ: ಪಂಚಮಸಾಲಿ ಸಮಾಜಕ್ಕೆ‌ 2ಎ ಮೀಸಲಾತಿ ಕೊಡುವೆ ಎಂದಿದ್ದ ಬಿ ಎಸ್ ಯಡಿಯೂರಪ್ಪ ಅವರು ಕೊನೆಗೂ ಮೀಸಲಾತಿ ಕೊಡಲಿಲ್ಲ. ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಶಾಪದಿಂದಲೇ ಬಿಎಸ್ ವೈ ಅಧಿಕಾರ ಕಳೆದುಕೊಂಡರು ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಮೀಸಲಾತಿ ಕೊಡುತ್ತೇನೆ ಎಂದ ಯಡಿಯೂರಪ್ಪ ಮೀಸಲಾತಿ ಕೊಡಲಿಲ್ಲ. ಅದೇ ಕಾರಣಕ್ಕಾಗಿಯೇ ಯಡಿಯೂರಪ್ಪ ಅಧಿಕಾರ ಹೋಯ್ತು. ಸ್ವಾಮೀಜಿ ಅವರ ಶಾಪವೇ ಯಡಿಯೂರಪ್ ಗೆ ತಟ್ಟಿದೆ. ಸಮಾಜಕ್ಕೆ ಮೀಸಲಾತಿಗೆ ನಾವು ಅಂತಿಮ ಹೋರಾಟ ಆರಂಭಿಸಿದ್ದೇವೆ. ನಾವು ಸುಮ್ಮನಿರುವುದಿಲ್ಲ. ಪಂಚಮಸಾಲಿಗಳು ಏಳಿ ಕೇಳಿ ತಲೆ ಕೆಟ್ಟವರು. ತಲೆ ಕೆಟ್ಟರೆ‌ ಸುಮ್ಮನಿರುವುದಿಲ್ಲ. ಪಂಚಮಸಾಲಿ ಸ್ವಾಮೀಜಿ ಅವರನ್ನು 700 ಕಿಮೀ ನಡೆಸಿದರು. ಈ ಕಾರಣಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಪಂಚಮಸಾಲಿ ಸ್ವಾಮೀಜಿ ಶಾಪದಿಂದ ಅಧಿಕಾರ ಕಳೆದುಕೊಂಡರು ಎಂದರು.

ಇದನ್ನೂ ಓದಿ:ಅ.1 ರಿಂದ ಪಂಚಮಸಾಲಿ ಸಮುದಾಯದಿಂದ ಸತ್ಯಾಗ್ರಹ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಸ್ವಾಮೀಜಿಯನ್ನು 712 ಕಿಲೋ‌ ಮೀಟರ್ ನಡೆಸೋ ಅವಶ್ಯಕತೆ ಇತ್ತಾ? ಮೀಸಲಾತಿ ಕೊಡುತ್ತೇನೆಂದು ಸುವರ್ಣಸೌಧದ ಮುಂದೆ ಮಾತು ಕೊಟ್ಟು ತಪ್ಪಿದರು. ಮೀಸಲಾತಿ ಕೊಡಲಾರದಿದ್ದಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಬಸನಗೌಡ ಪಾಟೀಲ್ ಯತ್ನಾಳ್ ಮೀಸಲಾತಿಗಾಗಿಯೇ ಯಡಿಯೂರಪ್ಪ ರನ್ನು ಬೈದಿದ್ದು, ಯಾವುದೇ ವೈಯಕ್ತಿಕ ಕಾರಣಕ್ಕೆ ಅಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next