Advertisement

ಯಡಿಯೂರಪ್ಪ ಎಲ್ಲ ಪರೀಕ್ಷೆ ಪಾಸಾಗಿದ್ದಾರೆ; ಬಿಜೆಪಿ ಗೆಲುವು ಖಚಿತ: ಶಾ

11:05 AM May 09, 2018 | udayavani editorial |

ಹೊಸದಿಲ್ಲಿ : “ಬಿ ಎಸ್‌ ಯಡಿಯೂರಪ್ಪ ತಮಗೆದುರಾಗಿರುವ ಎಲ್ಲ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ; ಕರ್ನಾಟಕದಲ್ಲಿ ಬಿಜೆಪಿ ಗೆಲ್ಲುವುದು ಖಚಿತ” ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

”ಬಿಜೆಪಿಗೆ ಯಾವುದೇ ರೀತಿಯ ಚುನಾವಣೋತ್ತರ ಹೊಂದಾಣಿಕೆ, ಮೈತ್ರಿಗಳ ಅಗತ್ಯ ಬೀಳುವುದಿಲ್ಲ; ಕರ್ನಾಟಕದಲ್ಲಿ ಮುಂದಿನ ಸರಕಾರವನ್ನು ರಚಿಸುವುದು ಬಿಜೆಪಿಯೇ” ಎಂದು ಅಮಿತ್‌ ಶಾ ವಿಶ್ವಾಸಭರಿತರಾಗಿ ಝೀ ನ್ಯೂಸ್‌ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. 

5.6 ಕೋಟಿ ಮತದಾರರು ಇದೇ ಮೇ 12ರಂದು ಮತ ಚಲಾಯಿಸುವ ಕರ್ನಾಟಕ ವಿಧಾನಸಭೆಯ 224 ಸ್ಥಾನಗಳ ಪೈಕಿ 113 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ಗೆಲುವುದು ಖಚಿತ; ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿನ ಎಲ್ಲ ಪರೀಕ್ಷೆಗಳಲ್ಲಿ ಪಾಸಾಗಿರುವ ಬಿ ಎಸ್‌ ಯಡಿಯೂರಪ್ಪ ಅವರೇ ಮುಂದಿನ ಸಿಎಂ ಆಗುವುದು ಖಚಿತ ಎಂದು ಅಮಿತ್‌ ಶಾ ಹೇಳಿದರು. 

ಕರ್ನಾಟಕದಲ್ಲಿ ಹಾಲಿ ಪರಿಸ್ಥಿತಿ ಘನ ಗಂಭೀರವಾಗಿದೆ; ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ. ಕಳೆದ ನಾಲ್ಕು ವರ್ಷಗಳಿಂದ ಜನರ ಆಶೋತ್ತರಗಳನ್ನು ನಿರ್ಲಕ್ಷಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಂದಿನಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ; ರೈತರ ಆತ್ಮಹತ್ಯೆಯಲ್ಲಿ ಶೇ.173ರಷ್ಟು ಹೆಚ್ಚಳವಾಗಿದೆ. ಕರ್ನಾಟಕಕ್ಕೆ ಜನರ ಸಮಸ್ಯೆಗಳನ್ನು ಆಲಿಸುವ, ಪರಿಹರಿಸುವ ಸರಕಾರದ ಅಗತ್ಯವಿದೆ ಎಂದು ಅಮಿತ್‌ ಶಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next