Advertisement

ಯಡಿಯೂರಪ್ಪಗೆ ವಾಸ್ತವ ಗೊತ್ತಿಲ್ಲ : ಸಿದ್ದರಾಮಯ್ಯ ವಾಗ್ದಾಳಿ

11:56 AM Oct 30, 2019 | Suhan S |

ಬೆಳಗಾವಿ : ರಾಜ್ಯದ ಜನರು ನೆರೆಯಿಂದ ಅನುಭವಿಸಿದ ಸಂಕಷ್ಟವನ್ನು ನೋಡಿದ್ದೇನೆ ಹಾಗೂ ನೆರೆ ಪರಿಹಾರ ಕುರಿತು ಸಂತ್ರಸ್ತರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ನೆರೆ ಸಂತ್ರಸ್ತರ ಬಗ್ಗೆ ಸಿಎಂ ಯಡಿಯೂರಪ್ಪಗೆ ವಾಸ್ತವಂಶ ಗೊತ್ತಿಲ್ಲ.ಮುಖ್ಯಮಂತ್ರಿಗಳು  ಬೆಂಗಳೂರಿನಲ್ಲಿ ಕುಳಿತು ಏನೇನೋ ಹೇಳಿಕೆ ಬಿಡುಗಡೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.  ಯಡಿಯೂರಪ್ಪನವರಿಗೆ ಸತ್ಯ ಗೊತ್ತಿಲ್ಲ. ಪ್ರಚಾರಕ್ಕಾಗಿ ನಾನು ಹೇಳಿಕೆ ನೀಡುತ್ತಿದ್ದೇನೆ ಎಂದು ಹೇಳತ್ತಾರಲ್ಲ ನಾಚಿಕೆಯಾಗಬೇಕು  ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next