Advertisement

BSY- Vijayendra ವಿರುದ್ಧ ಯತ್ನಾಳ್ ಮಾಡಿದ್ದ ಆರೋಪ ಮರೆಯಬಾರದು: ಎಂ.ಬಿ ಪಾಟೀಲ್

12:28 PM Aug 15, 2023 | keerthan |

ವಿಜಯಪುರ: ರಾಜ್ಯ ಸರ್ಕಾರ, ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ ವಿರುದ್ಧ ಏನೇನು ಆರೋಪ ಮಾಡಿದ್ದನ್ನು ಮರೆಯಬಾರದು ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತಿರುಗೇಟು ನೀಡಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಅವರ ಮಗ ಬಿ.ವೈ.ವಿಜಯೇಂದ್ರ ಮಾಡುತ್ತಿರುವ ಭ್ರಷ್ಟಾಚಾರ ಮಿತಿ ಮೀರಿದೆ. ಮಾರಿಶಸ್ ಪ್ರವಾಸಕ್ಕೆ ಪದೇ ಪದೇ ಹೋಗುತ್ತಿರುವುದೇ ಅದಕ್ಕಾಗಿ ಎಂದು ಇದೇ ಯತ್ನಾಳ ಗಂಭೀರ ಆರೋಪ ಮಾಡಿದ ವಿಡಿಯೋಗಳನ್ನು ರಾಜ್ಯದ ಜನರು ನೋಡಿದ್ದಾರೆ ಎಂದು ಪ್ರತಿದಾಳಿ ನಡೆಸಿದರು.

ರಾಜ್ಯ ಜನರಿಂದ ತಿರಸ್ಕೃತರಾದ ಬಿಜೆಪಿ ನಾಯಕರು 136 ಶಾಸಕರೊಂದಿಗೆ ಅಭೂತಪೂರ್ವ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸುಭದ್ರ ಸರ್ಕಾರ ಪತನ ಯಾರಿಂದಲೂ ಸಾಧ್ಯವಿಲ್ಲ. ಯತ್ನಾಳ ಅವರಂಥ ಯಾರೋ ಒಬ್ಬರು ನೀಡಿದ ಬಾಲಿಷ ಹೇಳಿಕೆಯಿಂದ ಸರ್ಕಾರಕ್ಕೆ ಏನೂ ಆಗದು. ಜನಾಶೀರ್ವಾದದ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ಯತ್ನಾಳ ಅವರನ್ನು ಕುಟುಕಿದರು.

ಹಿಂದಿನ ಸರ್ಕಾರ ಬಜೆಟ್ ಮಂಡಿಸಿದ ಬಳಿಕ ಅಸ್ತಿತ್ವಕ್ಕೆ ಬಂದ ನಮ್ಮ ಸರ್ಕಾರ ಇದೀಗ ಭಾಗಶ ಬಜೆಟ್ ಮಂಡಿಸಿದೆ. ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಮಂಡಿಸುವ ಮುಂದಿನ ಬಜೆಟ್‍ನಲ್ಲಿ ಕೃಷ್ಣೆಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next