Advertisement

ಕೇಂದ್ರದ ವಿರುದ್ಧ ಯತ್ನಾಳ ಹೇಳಿದ್ದು ಸರಿಯಾಗಿದೆ: ಕತ್ತಿ

11:36 AM Oct 24, 2019 | Team Udayavani |

ಸಂಕೇಶ್ವರ: ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ತಾರತಮ್ಯ ಮಾಡಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಯನ್ನು ಶಾಸಕ ಉಮೇಶ್‌ ಕತ್ತಿ ಸಮರ್ಥಿಸಿಕೊಂಡಿದ್ದು, ಯತ್ನಾಳ್‌ ಸಂತ್ರಸ್ತರ ಪರವಾಗಿ ಮಾತನಾಡಿರುವುದು ಸರಿಯಾಗಿಯೇ ಇದೆ ಎಂದು ತಿಳಿಸಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ ಸಂತ್ರಸ್ತರು ಪರಿಹಾರವಿಲ್ಲದೆ ಗೋಳಾಡುತ್ತಿರುವುದನ್ನು ಕಂಡು ಅವರು ಹೇಳಿಕೆ ನೀಡಿದ್ದಾರೆ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಕುರಿತು ಮಾತನಾಡಬೇಕಾಗುತ್ತದೆ. ಅದರಂತೆ ಯತ್ನಾಳ್‌ ಕೂಡ ಮಾತನಾಡಿದ್ದಾರೆ. ಅದರಲ್ಲಿ ತಪ್ಪಿಲ್ಲ. ನಮ್ಮ ಭಾಗಕ್ಕೆ ಕಾವೇರಿ ಅಥವಾ ಮೇಕೆದಾಟು ಯೋಜನೆಗಳು ಆವಶ್ಯಕತೆ ಇಲ್ಲ. ನಮಗೆ ಮಹಾದಾಯಿ ಯೋಜನೆ ಆವಶ್ಯಕ. ಈ ಸಮಸ್ಯೆಯನ್ನು ಬೇಗ ಪರಿಹರಿಸಬೇಕು ಎಂದವರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next