Advertisement

Kannada Cinema; ‘ಅಗ್ನಿಲೋಕ’ ಮೂಲಕ ಚಿತ್ರರಂಗಕ್ಕೆ ಬಂದ ಯಶಸ್ವ

12:43 PM Feb 04, 2024 | Team Udayavani |

ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಹಕ, ನಿರ್ಮಾಪಕ, ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ ಪ್ರಥಮ ಅಧ್ಯಕ್ಷರೂ ಆಗಿದ್ದ ಹೆಚ್‌.ಎಂ.ಕೆ. ಮೂರ್ತಿ ಅವರ ಮೊಮ್ಮಗ ಹಾಗೂ ನಿರ್ದೇಶಕ, ನಿರ್ಮಾಪಕ ರಾಜೇಶ್‌ ಮೂರ್ತಿ ಅವರ ಪುತ್ರ ಯಶಸ್ವ ಈಗ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಅಣಿಯಾಗಿದ್ದಾರೆ.

Advertisement

ಅಂದಹಾಗೆ, ಯಶಸ್ವ ಆಕ್ಷನ್‌ ಹೀರೋ ಆಗಿ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾಕ್ಕೆ “ಅಗ್ನಿಲೋಕ’ ಎಂದು ಹೆಸರಿಡಲಾಗಿದ್ದು, ಎಮೋಷನಲ್‌ ಹಾಗೂ ಆ್ಯಕ್ಷನ್‌-ಥ್ರಿಲ್ಲರ್‌ ಕಥಾಹಂದರ “ಅಗ್ನಿಲೋಕ’ ಸಿನಿಮಾ ಈಗ ಬಿಡುಗಡೆಯ ಹಂತದಲ್ಲಿದೆ.

ಇನ್ನು ಮಗನ ಚಿತ್ರಕ್ಕೆ ರಾಜೇಶ್‌ ಮೂರ್ತಿ ಅವರೇ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ. ವಿಷ್ಣು “ಪುಷ್ಪ ಫಿಲಂಸ್‌’ ಮೂಲಕ ಪುಷ್ಪ ಮಂಜುನಾಥ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ತನ್ನ ಶೂಟಿಂಗ್‌ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ “ಅಗ್ನಿಲೋಕ’ ಸಿನಿಮಾ ಈಗ ಸೆನ್ಸಾರ್‌ ಮುಂದಿದೆ.

“ಅಗ್ನಿಲೋಕ’ ಸಿನಿಮಾದಲ್ಲಿ ಮಂಜುಶ್ರೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನೆ. ಲ ಮಹೇಶ್‌, ಮಂಜುನಾಥ್‌, ಅಜಿತ್‌ ಕುಮಾರ್‌, ಪ್ರಮೋದ್‌ ಹಿರೇಮಠ್ ಮತ್ತಿತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next