Advertisement

ವಸತಿ ಬಸ್‌ ತಡೆದು ಕಳಚೆ ಗ್ರಾಮಸ್ಥರ ಪ್ರತಿಭಟನೆ

05:04 PM Sep 27, 2022 | Team Udayavani |

ಯಲ್ಲಾಪುರ: ತಾಲೂಕಿನ ಕಳಚೆಯ ಕೆಲವು ಗ್ರಾಮಸ್ಥರು ದಿಢೀರ್‌ ವಸತಿ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

Advertisement

ಬೆಳಗ್ಗೆ 7:30 ಗೆ ಕಳಚೆಯಿಂದ ಬಿಡಬೇಕಾದ ಬಸ್ಸನ್ನು 6:30 ಕ್ಕೆ ಬಿಡಲು ಆರಂಭಿಸಿದ್ದು ಇದರಿಂದ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಮೊದಲಿನಂತೆ 7:30 ಕ್ಕೇ ಬಿಡಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಕಳಚೆಗೆ ಬಿಡುತ್ತಿದ್ದ ಆರು ಬಸ್‌ಗಳಲ್ಲಿ ಈಗ ಮೂರು ಸಲ ಮಾತ್ರ ಬಿಡುತ್ತಿದ್ದಾರೆ.

ಈ ಮೊದಲಿನಂತೆ ಸಮಯ ಮತ್ತು ಬಸ್‌ಗಳನ್ನು ಬಿಡಬೇಕೆಂದು ಒತ್ತಾಯಿಸಿದರು. ನಂತರ ಜನರ ಬೇಡಿಕೆಗೆ ಸಾರಿಗೆ ಅಧಿಕಾರಿಗಳು ಸ್ಪಂದಿಸಿದ ಬಳಿಕ ತಡೆಹಿಡಿದಿದ್ದ ಬಸ್ಸನ್ನು ಕಳಿಸಿಕೊಟ್ಟರು. ಗ್ರಾಮಸ್ಥರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಬೆಳಗ್ಗೆ 9ಕ್ಕೆ ಕಳಚೆಗೆ ಹೋಗಬೇಕಿದ್ದ ಬಸ್ಸು ಯಲ್ಲಾಪುರದಿಂದ ಬಿಡದ ಕಾರಣ ಕಳಚೆ ಮತ್ತು ಆ ಮಾರ್ಗದಲ್ಲಿ ಆ ವೇಳೆಗೆ ಹೋಗಬೇಕಿದ್ದ ಶಿಕ್ಷಕರು, ಆರೋಗ್ಯ ಸಿಬ್ಬಂದಿ ಮಲವಳ್ಳಿ ಬಸ್ಸಿಗೆ ತೆರಳಿ ತಳಕೆಬೈಲ್‌ದಿಂದ ನಡೆದುಕೊಂಡೇ ಹೋದರು. ಆದರೆ ಆ ನಂತರದಲ್ಲಿ ಪ್ರತಿಭಟನಾಕಾರರ ಬೇಡಿಕೆ ಮನವಿ ಸ್ವೀಕರಿಸಲು ಸಾರಿಗೆ ನಿಯಂತ್ರಕರೊಬ್ಬರೇ ಪ್ರತ್ಯೇಕ ಬಸ್ಸಿನಲ್ಲಿ ಕಳಚೆಗೆ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next