Advertisement

Yalandur: ಕುಡಿವ ನೀರಿನಲ್ಲಿ ಹುಳುಗಳು!

04:30 PM Sep 26, 2023 | Team Udayavani |

ಯಳಂದೂರು: ಬಳೇಪೇಟೆಯ 10, 11 ನೇ ವಾರ್ಡಿನಲ್ಲಿ ಸೋಮವಾರ ಪಪಂನಿಂದ ಸರಬರಾಜಾಗುವ ಕುಡಿಯುವ ನೀರಿನಲ್ಲಿ ಹುಳು ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ವಾರ್ಡುಗಳಲ್ಲಿನ ಕೆಲ ಮನೆಗಳಲ್ಲಿನ ನಲ್ಲಿ ನೀರಿನಲ್ಲಿ ಸಹಸ್ರಪದಿ ಹೋಲುವ ಹುಳು ಕಾಣಿಸಿಕೊಂಡಿವೆ.

Advertisement

ಕುಡಿಯುವ ನೀರು ಸಂಗ್ರಹಿಸಲು ಬಿಂದಿಗೆ ಇಟ್ಟಿದ್ದ ಜುಬೇದಬೇಗಂ ಹಾಗೂ ಜಬೀನ್‌ ತಾಜ್‌ ಎಂಬವರು ವಿಚಲಿತರಾಗಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದಲೂ ಹುಳುಗಳು ಕಾಣಿಸಿ ಕೊಂಡಿರುವುದು ಬಡಾವಣೆಯ ಇತರರಿಂದ ಗೊತ್ತಾಗಿದೆ. ಪಟ್ಟಣದ ವಾಸಿಗಳಿಗೆ ಶುದ್ಧ ಕುಡಿವ ನೀರು ಲಭ್ಯವಾಗುತ್ತಿಲ್ಲ. ಪದೇ ಪದೆ ಕುಡಿಯುವ ನೀರಿನಲ್ಲಿ ಕಲ್ಮಶ ಕಾಣಿಸಿಕೊಳ್ಳುತ್ತವೆ. ಹುಳು, ಕೆಲವೊಮ್ಮೆ ಹಾವಿನ ಮರಿಗಳೂ ನೀರಿನಲ್ಲಿ ಬಂದಿರುವ ಉದಾಹರಣೆ ಇವೆ. ಕಾವೇರಿ ಕುಡಿಯುವ ನೀರು ಬಳೇಪೇಟೆಗೆ ಸರಬರಾಜೇ ಆಗುತ್ತಿಲ್ಲ. ಅಲ್ಲಿನ ನೀರು ಸರಿಯಾಗಿ ಶುದ್ಧೀಕರಿಸುವುದಿಲ್ಲ. ಅಲ್ಲಲ್ಲಿ ಪೈಪ್‌ ಒಡೆದರೂ ಇದರ ದುರಸ್ತಿ ಸೂಕ್ತ ಕಾಲದಲ್ಲಿ ಆಗುವುದಿಲ್ಲ. ಈಚೆಗೆ ಬಳೇಪೇಟೆಯ ಸರ್ಕಲ್‌ನಲ್ಲಿ 2 ಬಾರಿ ಪೈಪ್‌ ಒಡೆದು ದುರಸ್ತಿ ಮಾಡಲಾಗಿದೆ. ನೀರಿನೊಂದಿಗೆ ಇತರೆ ಕಲ್ಮಶ, ಕಲ್ಲು, ಮಣ್ಣು ಮಿಶ್ರಿತ ನೀರೂ ಸರಬರಾಜಾಗುತ್ತಿದೆ. ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂಬುದು ಇಲ್ಲಿನ ವಾಸಿಗಳಾ ಮನು, ಸುರೇಶ್‌ ಸೇರಿದಂತೆ ಹಲವರ ದೂರಾಗಿದೆ.

ಕ್ರಮ ವಹಿಸುತ್ತೇನೆ: ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ, ನೌಕರರನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಸಂಗ್ರಹಿಸಿ ಮತ್ತೆ ಇದು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಯಳಂದೂರು ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್‌ ತಿಳಿಸಿದರು.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next