Advertisement

ನಿರಾಶ್ರಿತರ ಕೇಂದ್ರಕ್ಕೆ ನ್ಯಾಯಾಧೀಶರ ಭೇಟಿ

05:15 PM Apr 09, 2020 | Naveen |

ಯಲಬುರ್ಗಾ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೊರೊನಾ ಮುಂಜಾಗ್ರತೆ ಕ್ರಮವಾಗಿ ಸ್ಥಾಪಿಸಲಾದ ವಲಸಿಗರ ನಿರಾಶ್ರಿತರ ಕೇಂದ್ರಕ್ಕೆ ಹಿರಿಯ ಸಿವಿಲ್‌ ನ್ಯಾಯಾಧೀಶೆ ಶುಭ ಅವರು ಬುಧವಾರ ಭೇಟಿ ನೀಡಿ ನಿರಾಶ್ರಿತರ ಆರೋಗ್ಯ ವಿಚಾರಣೆ ನಡೆಸಿ ಕೇಂದ್ರ ಪರಿಶೀಲನೆ ನಡೆಸಿದರು.

Advertisement

ಬಳಿಕ ಹಿರಿಯ ಸಿವಿಲ್‌ ನ್ಯಾಯಾಧೀಶೆ ಶುಭ ಮಾತನಾಡಿ, ಕೇಂದ್ರದಲ್ಲಿ ಮೈಸೂರನಿಂದ ಬಂದ 18 ಜನರನ್ನು ಈ ಕೇಂದ್ರದಲ್ಲಿ ಇರಿಸಲಾಗಿದೆ. ಕೇಂದ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೇಂದ್ರದಲ್ಲಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೊರೊನಾ ಮಹಾಮಾರಿ ರೋಗವನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರು ಆರೋಗ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿಯೊಬ್ಬರು ವಿಶೇಷವಾಗಿ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಲಾಕ್‌ಡೌನ್‌ನ್ನು ಪ್ರತಿಯೊಬ್ಬ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಮನೆಯಲ್ಲಿಯೇ ಇರಬೇಕು. ವಿನಾಕಾರಣ ರಸ್ತೆಗೆ ಇಳಿಯಬಾರದು. ಈಗಾಗಲೇ ಪಕ್ಕದ ಗದಗ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿದ್ದು, ಮಾಹಿತಿ ಇದೆ ಇನ್ನಾದರೂ ತಾಲೂಕಿನ ಜನತೆ ಅತೀ ಜಾಗೃತಿಯಿಂದ ಇರಬೇಕು ಎಂದರು.

ಕಿರಿಯ ಶ್ರೇಣಿ ನ್ಯಾಯಾ ಧೀಶರಾದ ಶ್ರೀಶೈಲ ಬಾಗಡೆ, ಸಮಾಜ ಕಲ್ಯಾಣ ಅಧಿ ಕಾರಿ ವಿ.ಕೆ. ಬಡಿಗೇರ, ಬಿಸಿಎಂ ಅಧಿ ಕಾರಿ ಎಸ್‌.ವಿ. ಭಜಂತ್ರಿ, ವಸತಿ ಶಾಲೆಯ ಪ್ರಾಚಾರ್ಯ ಅಮೀದಸಾಬ್‌ ಅತ್ತರ, ಕೋರ್ಟ್‌ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next