Advertisement
ಉತ್ತಮ ಪರಿಸರ, ಹಸಿರು ಪರಿಸರ ಆರೋಗ್ಯದ ಮೂಲ ಎಂಬುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಈ ಶಾಲೆ ಹಸಿರುನಿಂದ ಕಂಗೊಳಿಸುತ್ತಿದ್ದು, ಒಳ ಪ್ರವೇಶಿಸಿದರೆ ಅಹ್ಲಾದಕರ ವಾತಾವರಣ ಸಿಗುತ್ತದೆ. ಆವರಣದೊಳಗಿನ ವಿಧ ವಿಧದ ಮರಗಳು ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಿವೆ. ಮರಗಳ ನೆರಳ ಕೆಳಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿಯುವ ಇಲ್ಲಿನ ವಿದ್ಯಾರ್ಥಿಗಳಲ್ಲಿ ಧನ್ಯತಾಭಾವ ಮೂಡಿದೆ.
Related Articles
Advertisement
ಶಾಲೆಗೆ 2013-14ರಲ್ಲಿ ಕೊಪ್ಪಳ ಜಿಲ್ಲಾ ಹಸಿರು ಶಾಲಾ ಪ್ರಶಸ್ತಿ, 2017-18ನೇ ಸಾಲಿನ ಸ್ವಚ್ಚ ಭಾರತ ಮಿಷನ್ನ ಸ್ವತ್ಛ ಸರ್ವೇಕ್ಷಣ ಪ್ರಶಸ್ತಿಯೂ ಲಭಿಸಿದೆ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಬಂಧ ಸೇರಿ ವಾರಕೊಮ್ಮೆ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಶಾಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಹಸಿರಿನಿಂದ ಕಂಗೊಳಿಸಲು ಶಾಲೆಯಲ್ಲಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಯಮನೂರಪ್ಪ ಪ್ರಭಣ್ಣನವರ, ವೀರಣ್ಣ ಬಂಡಿಹಾಳ ಶ್ರಮಿಸಿದ್ದಾರೆ ಎಂದು ಶಾಲೆಯ ಶಿಕ್ಷಕರು ಹೇಳುತ್ತಾರೆ.
ಇಲ್ಲಿನ ಮಕ್ಕಳ ಇಂಗ್ಲಿಷ್ ಕಲಿಕೆಯನ್ನು ಗಮನಿಸಿದರೇ ಎಂತಹವರೂ ಬೆರಗಾಗುತ್ತಾರೆ. ಆಂಗ್ಲ ಭಾಷೆಯ ಪದ್ಯ, ಕತೆಗಳನ್ನು ಶಿಕ್ಷಕರು ಹೇಳಿಕೊಡುವತ್ತ ಹೆಚ್ಚಿನ ಕಾಳಜಿ ಹೊಂದಿದ್ದರಿಂದ ಈ ಶಾಲೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡಬಲ್ಲದು ಎಂಬಷ್ಟರ,ಮಟ್ಟಿಗಿದೆ. ಶಾಲೆಯಲ್ಲಿ ಶಾಲಾ ಸಂಸತ್ತು ರಚನೆಯಾಗಿದೆ. ತೋಟಗಾರಿಕೆ ಮಂತ್ರಿಯಾಗಿರುವ ವಿದ್ಯಾರ್ಥಿ ಶಶಿಕುಮಾರ ಮಂಡಲಗೇರಿ, ಯಾರೇ ಶಾಲೆಗೆ ಬಂದರೂ ಅವರಿಗೆ ಆವರಣದಲ್ಲಿರುವ ಸಸಿಗಳನ್ನು ತೋರಿಸಿ ಅದರ ಬಗ್ಗೆ ವಿವರಿಸುವ ಮೂಲಕ ಉಪಯೋಗ ಕುರಿತು ತಿಳಿಸುತ್ತಾನೆ. ಆತನ ಪರಿಸರ ಕಾಳಜಿ ಎಲ್ಲರಿಗೂ ಮೆಚ್ಚುಗೆ ಗಳಿಸಿದೆ.
ಶಾಲೆಯ ಆವರಣದಲ್ಲಿ ಗಿಡಗಳನ್ನು ಪೋಷಿಸಲಾಗುತ್ತಿದೆ. ಇದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರವೂ ಇದೆ. ಸ್ವಚ್ಚಂದ ಪರಿಸರ ನಿರ್ಮಿಸುವುದು ನಮ್ಮೆಲ್ಲರ ಹೊಣೆ. ಇದರಿಂದ ನೆಮ್ಮದಿಯ ವಾತಾವರಣ ಲಭಿಸುತ್ತದೆ.ಎಸ್.ಎ. ಕೋಡಿ, ಮುಖ್ಯಶಿಕ್ಷಕ ಮಲ್ಲಪ್ಪ ಮಾಟರಂಗಿ