Advertisement

ಯಕ್ಷಗಾನವು ಭಾರತೀಯ ಸಾಂಸ್ಕೃತಿಕ ರಾಯಭಾರಿ: ಸಂತೋಷ ಕುಮಾರ್‌ ಹೆಗ್ಡೆ

06:45 AM Aug 08, 2017 | Team Udayavani |

ಕಿನ್ನಿಗೋಳಿ: ಶಿಷ್ಟ ಪರಂಪರೆಯ ಯಕ್ಷಗಾನ ಕಲೆ ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿದ್ದು, ವಿಶ್ವಮಾನ್ಯ ವಾಗಿದೆ ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವ ದೇವಸ್ಥಾನದ ಮೊಕ್ತೇಸರ ಸಂತೋಷ ಕುಮಾರ್‌ ಹೆಗ್ಡೆ ಹೇಳಿದರು. 

Advertisement

ಅವರು ಆ. 4ರಂದು ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗ ಪುರುಷದ ಆಶ್ರಯದಲ್ಲಿ ಯಕ್ಷಲಹರಿಯ 27ನೇ ವರ್ಷದ ಸಂಭ್ರಮ -2017 ಪ್ರಯುಕ್ತ ಕರ್ಣಾಟಕ ಬ್ಯಾಂಕ್‌ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮೂಡಬಿದಿರೆ ಸಹಕಾರಿ ಬ್ಯಾಂಕ್‌ ಪ್ರಬಂಧಕ ಚಂದ್ರಶೇಖರ ರಾವ್‌ ಮಾತ ನಾಡಿ, ಕಿನ್ನಿಗೋಳಿಯ ಯಕ್ಷಲಹರಿಯು ಯಕ್ಷಗಾನದಲ್ಲಿ ಯುವ ಪೀಳಿಗೆಗೆ ಹಾಗೂ ಮಹಿಳೆಯರಿಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. 

ಸಮ್ಮಾನ
ಕಲಾವಿದೆ ಪೂರ್ಣಿಮಾ ಯತೀಶ್‌ ರೈ ಕಾಟಿಪಳ್ಳ ಅವರನ್ನು ಸಮ್ಮಾನಿಸ ಲಾಯಿತು.  ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್‌ , ಮೂಡಬಿದಿರೆಯ  ಆರ್‌. ಕೆ. ಎಂಟರ್‌ಪ್ರಸಸ್‌ ರಾಮಕೃಷ್ಣ ಭಟ್‌, ವಿ4 ವಾಹಿನಿ ನಮ್ಮಕುಡ್ಲದ ಲೀಲಾಕ್ಷ ಕರ್ಕೇರ,  ಮುಂಬಯಿಯ ಉದ್ಯಮಿ ರತ್ನಾ ಎಸ್‌. ಕೋಟ್ಯಾನ್‌ ದಾಮಸಕಟ್ಟೆ, ಪುನರೂರು ಪ್ರತಿಷ್ಠಾನ ಅಧ್ಯಕ್ಷ  ದೇವಪ್ರಸಾದ್‌ ಪುನರೂರು, ಉದ್ಯಮಿ ಯಾದವ ಕೋಟ್ಯಾನ್‌ ಪೆರ್ಮುದೆ, ಶ್ರೀವತ್ಸ, ಅಶೋಕ ಆಚಾರ್ಯ, ವಿನಯ ಆಚಾರ್‌ ಹೊಸಬೆಟ್ಟು  ಮತ್ತಿತರರು ಉಪಸ್ಥಿತರಿದ್ದರು. 
ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್‌ ರಾವ್‌ ಸ್ವಾಗತಿಸಿದರು. ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ರಘುನಾಥ್‌ ಕೆ. ನಿರೂಪಿಸಿದರು. ವಸಂತ ದೇವಾಡಿಗ ವಂದಿಸಿದರು.ಬಳಿಕ “ಘಟೋತ್ಕಚ ವಧೆ’ ತಾಳಮದ್ದಳೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next