Advertisement

ಯಕ್ಷಗಾನ ಸಮ್ಮೇಳನ, ವಿಶ್ವಕೋಶಕ್ಕೆ ವಿಶೇಷ ಅನುದಾನ: ಸಚಿವ ಸುನಿಲ್‌

01:13 AM Jan 22, 2022 | Team Udayavani |

ಕಾರ್ಕಳ: ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ಹಾಗೂ ಯಕ್ಷಗಾನ ವಿಶ್ವಕೋಶ ತಯಾರಿ ಕುರಿತು ಬಜೆಟ್‌ನಲ್ಲಿ ವಿಶೇಷ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ವಿ. ಭರವಸೆ ನೀಡಿದರು.

Advertisement

ಶುಕ್ರವಾರ ವಿಧಾನಸೌಧದಲ್ಲಿ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ| ಜಿ.ಎಲ್ ಹೆಗಡೆ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಸಚಿವರು ಈ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಯಕ್ಷಗಾನ ಅಕಾಡೆಮಿಯ ಕಾರ್ಯದ ಜತೆಗೆ ಸದಾ ಬೆಂಬಲವಾಗಿರುತ್ತದೆ. ಸಾಹಿತ್ಯ ಸಮ್ಮೇಳನದಂತೆ ಯಕ್ಷಗಾನದ ಸಮ್ಮೇಳನ ಕೂಡ ಆಗಬೇಕು. ಇದರಿಂದ ಯಕ್ಷಗಾನದ ಪ್ರಸಿದ್ಧಿ, ವಿಸ್ತರಣೆ ಸಾಧ್ಯವಾಗುತ್ತದೆ. ಕೋವಿಡ್‌ ಕಡಿಮೆ ಆದ ಬಳಿಕ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾ ಗುವುದು ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next