Advertisement

ಪಟ್ಲ ಫೌಂಡೇಶನ್‌ ಬಹ್ರೈನ್‌ – ಸೌದಿ ಘಟಕ ; ನೂತನ ಅಧ್ಯಕ್ಷರಾಗಿ ನರೇಂದ್ರ ಶೆಟ್ಟಿ ಆಯ್ಕೆ

12:55 PM Dec 09, 2023 | Team Udayavani |

ಬಹ್ರೈನ್‌: ಯಕ್ಷ ಧ್ರುವ ಫೌಂಡೇಶನ್‌ ಬಹ್ರೈನ್‌- ಸೌದಿ ಘಟಕದ ತೃತೀಯ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ಇತ್ತೀಚೆಗೆ ಜರುಗಿತು. ಇದೇ ಸಂದರ್ಭದಲ್ಲಿ ಘಟಕದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಹಾಗೂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಪಟ್ಲ ಸತೀಶ್‌ ಶೆಟ್ಟಿಯವರ ಸಮ್ಮುಖದಲ್ಲಿ ನಡೆಸಲಾಯಿತು.

Advertisement

ಬಹ್ರೈನ್‌ ಸೌದಿ ಘಟಕದ ನೂತನ ಅಧ್ಯಕ್ಷರಾಗಿ ಸೌದಿ ಅರೇಬಿಯಾದ ಕನ್ನಡಿಗ, ಸಮಾಜ ಸೇವಕ ಕರ್ನಿರೆ ಮಾಗಂದಡಿ ನರೇಂದ್ರ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ ಶೆಟ್ಟಿ ಅವರು ಮೂಲತಃ ಕರ್ನಿರೆ ಮಾಗಂದಡಿಯವರಾಗಿದ್ದು ಉದ್ಯೋಗ ನಿಮಿತ್ತ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು ತಮ್ಮ ಸಮಾಜ ಸೇವೆಯಿಂದಾಗಿ ಸೌದಿ ಅರೇಬಿಯಾ ಹಾಗೂ ಬಹ್ರೈನ್‌ ದ್ವೀಪದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.

ವಿವಿಧ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ತನ್ಮೂಲಕ ಅಪಾರ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಈ ಹಿಂದೆ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಬಹ್ರೈನ್‌ ಸೌದಿ ಘಟಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಇದೀಗ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಲ್ಲರಲ್ಲೂ ಸಂತಸ ಉಂಟುಮಾಡಿದೆ. ಆಯ್ಕೆಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದ ಪಟ್ಲ ಸತೀಶ್‌ ಶೆಟ್ಟಿ ಯವರು ನರೇಂದ್ರ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳಿಗೆ ಶುಭ ಹಾರೈಸಿದರೆ, ನಿರ್ಗಮಿಸುವ ಅಧ್ಯಕ್ಷರಾದ ರಾಜೇಶ್‌.ಬಿ .ಶೆಟ್ಟಿ ಅವರು ಹೂಗುತ್ಛವನ್ನು ನೀಡಿ ಅಭಿನಂದಿಸಿದರು.

ವರದಿ- ಕಮಲಾಕ್ಷ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next