Advertisement

ಯಕ್ಷ ಗಾರುಡಿಗ ಪ್ರಶಸ್ತಿ ಪ್ರದಾನ

12:15 PM Jul 30, 2018 | Team Udayavani |

ಬೆಂಗಳೂರು: ಸೃಷ್ಟಿ ಕಲಾ ವಿದ್ಯಾಲಯದ ವತಿಯಿಂದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಕ್ಷ ಭಾಗವತ ಸುಬ್ರಾಯ ಹೆಬ್ಟಾರ್‌ ಅವರಿಗೆ ಯಕ್ಷ ಗಾರುಡಿಗ ಪ್ರಶಸಿ ಪ್ರದಾನ ಮಾಡಲಾಯಿತು.

Advertisement

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಬ್ರಾಯ ಹೆಬ್ಟಾರ್‌, ಕರಾವಳಿ ಭಾಗದ ಗಂಡು ಕಲೆ ಯಕ್ಷಗಾನ ನಗರದಲ್ಲಿ ಜನಪ್ರಿಯವಾಗುತ್ತಿದೆ. ಯುವತಿಯರೇ ಹೆಚ್ಚು ಯಕ್ಷ ಕಲಾವಿದರಾಗುವ ಮೂಲಕ ಗಂಡುಕಲೆ ಈಗ ಮಹಿಳೆಯ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಆಗುತ್ತಿದೆ.

ಯಕ್ಷಗಾನದಲ್ಲಿ ತೊಡಗಿಸಿಕೊಂಡರೆ ಧನಸಂಪತ್ತು ಹೆಚ್ಚಾಗದಿದ್ದರೂ ಕಲಾ ಸಂಪತ್ತು ವೃದ್ಧಿಸಿ ಆತ್ಮ ಸಂತೃಪ್ತಿಯಾಗುತ್ತದೆ ಎಂದು ಹೇಳಿದರು. ಬನಶಂಕರಿ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಾ ರಾಮಸ್ವಾಮಿ, ಸೃಷ್ಟಿ ಕಲಾ ವಿದ್ಯಾಲಯ ಅಧ್ಯಕ್ಷ ಛಾಯಪತಿ ಕಂಚಿಬೈಲ್‌, ಯಕ್ಷಗುರು ಡಾ.ರಾಧಾಕೃಷ್ಣ ಉರಾಳ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ಡಾ.ರಾಧಾಕೃಷ್ಣ ಉರಾಳ್‌ ಮಾರ್ಗದರ್ಶನದಲ್ಲಿ, ಸುಬ್ರಾಯ ಹೆಬ್ಟಾರ್‌ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next