Advertisement

ಅಯೋಧ್ಯೆಯಲ್ಲಿ ಯಾಗ

11:12 AM Nov 21, 2018 | Harsha Rao |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಡಿ.1-6ರ ವರೆಗೆ ವಿಶ್ವ ವೇದಾಂತ ಸಂಸ್ಥಾನ ಎಂಬ ಸಂಘಟನೆ “ಅಶ್ವಮೇಧ ಯಾಗ’ ನಡೆಸಲಿದೆ. ದೇಶದ ಲಕ್ಷಾಂತರ ಮಂದಿಯ ಭಾವನೆಗಳು ದೇಗುಲದ ಜತೆ ಬೆಸೆದುಕೊಂಡಿದೆ. ಹೀಗಾಗಿ ಡಿ.1-6ರ ವರೆಗೆ ಅಯೋಧ್ಯೆಯಲ್ಲಿ ಅಶ್ವಮೇಧ ಯಾಗ ಆಯೋಜಿಸಲಾಗಿದೆ ಎಂದು ಸಂಘಟನೆಯ ಸ್ಥಾಪಕ ಸ್ವಾಮಿ ಆನಂದ್‌ ಮಹಾರಾಜ್‌ ಮಂಗಳವಾರ ತಿಳಿಸಿದ್ದಾರೆ.  ಸುಪ್ರೀಂಕೋರ್ಟಲ್ಲಿ ಸ್ಥಳ ಯಾರಿಗೆ ಸೇರಿದ್ದು ಎಂಬ ಬಗ್ಗೆ ಜನವರಿಯಲ್ಲಿ ವಿಚಾರಣೆ ನಡೆಯಲಿದೆ. ಒಟ್ಟು 14 ಅರ್ಜಿಗಳು ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next