Advertisement

ಇಂದು ತಿಂಗಳೆಗೆ ಯದುವೀರ ಒಡೆಯರ್‌ 

07:30 AM Mar 08, 2018 | Team Udayavani |

ಹೆಬ್ರಿ: ತಿಂಗಳೆ ನೇಮೋತ್ಸವ, ಸಾಹಿತ್ಯೋತ್ಸವ ಮತ್ತು “ತಿಂಗಳೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾ. 8ರಂದು ಹೆಬ್ರಿ ಸಮೀಪದ ತಿಂಗಳೆಗೆ ಪಾಲ್ಗೊಳ್ಳುವರು. 

Advertisement

ಮಹಾರಾಜರನ್ನು ಸಂಜೆ 5 ಗಂಟೆಗೆ ಹೆಬ್ರಿಯಲ್ಲಿ ಪೂರ್ಣಕುಂಭ ಸಹಿತ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಬೃಹತ್‌ ವಾಹನ ಜಾಥಾದ ಮೂಲಕ ತಿಂಗಳೆ ಗರಡಿಗೆ ಕರೆದೊಯ್ಯಲಾಗುವುದು. ಅಲ್ಲಿ ಸಾಹಿತ್ಯೋತ್ಸವದ 57ನೇ ಅಧಿವೇಶನ ನಡೆಯಲಿದೆ.  ಡಾ| ಬನ್ನಂಜೆ ಗೋವಿಂದಾ ಚಾರ್ಯರು ಮತ್ತು ಚಿಂತಕಿ ಡಾ| ವೀಣಾ ಬನ್ನಂಜೆಯವರ ಪ್ರವಚನದ ಬಳಿಕ ಡಾ|ಎಂ.ಮೋಹನ ಆಳ್ವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next