Advertisement

ಯಡ್ತಾಡಿ ದೇವಸ್ಥಾನ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷಕ

11:24 AM Mar 09, 2018 | |

ಕೋಟ: ಯಡ್ತಾಡಿ ಚಾಮುಂಡೇಶ್ವರೀ ದೇವಸ್ಥಾನದ ಪುನಃ ಪ್ರತಿಷ್ಠೆ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ಜರಗಿತು. ಚಂಡಿಕಾ ಹೋಮ, ಬ್ರಹ್ಮಕಲಶಾಭಿಷೇಕ ಮುಂತಾದ ಧಾರ್ಮಿಕ ಕಾರ್ಯ ಕ್ರಮಗಳು ಗರಿಕೆಮಠ ಅರ್ಕಗಣಪತಿ ದೇವಸ್ಥಾನದ ಮುಖ್ಯಸ್ಥ ವೇ| ಮೂ| ರಾಮ್‌ ಪ್ರಸಾದ್‌ ಅಡಿಗರ ನೇತೃತ್ವದಲ್ಲಿ ಜರಗಿತು.

Advertisement

ಈ  ಸಂದರ್ಭ ಶ್ರೀ ದೇವರಿಗೆ ಅರುಣ್‌ ಹೆಗ್ಡೆ ಯಡ್ತಾಡಿ ಹಗ್ಡೇರಮನೆ ಯವರು ಬೆಳ್ಳಿ ಮುಖವಾಡ ಹಾಗೂ ರಾಮಣ್ಣ ಹೆಗ್ಡೆ ಮತ್ತು ಸಹೋದರರು ತಾಮ್ರದ ಪ್ರಭಾವಳಿ ಸಮರ್ಪಿಸಿದರು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಅನ್ನಸಂತರ್ಪಣೆ ನಡೆಯಿತು. ದೇಗುಲದ ಆಡಳಿತ ಮೊಕ್ತೇಸರ ವೈ. ವಿಟ್ಟಲ ಹೆಗ್ಡೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next