Advertisement

Yadgir: ರೀಲ್ಸ್ ಮಾಡಿದ ಯುವಕನಿಗೆ ಜೀವ ಬೆದರಿಕೆ ಹಾಕಿದ ಡಿ.ಬಾಸ್ ಸಂಘದ ಜಿಲ್ಲಾಧ್ಯಕ್ಷ!

07:52 PM Jun 15, 2024 | Team Udayavani |

ಯಾದಗಿರಿ: ಇಡೀ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ರೇಣುಕಾ ಸ್ವಾಮಿ ಹತ್ಯೆ ಬಳಿಕ ನಟ ದರ್ಶನ್ ಮತ್ತು ಸಹಚರರ ಬಂಧನಕ್ಕೆ ಸಂಬಂಧಿಸಿದಂತೆ ಯಾದಗಿರಿ ನಗರದಲ್ಲಿ ಅಭಿ ಎಂಬ ಯುವಕನಿಗೆ ದರ್ಶನ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಜು ಎಂಬಾತ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

Advertisement

ಪಂಚರ್ ಅಂಗಡಿ ನಡೆಸುತ್ತಿರುವ ಯುವಕ ಅಭಿ ಸಾಮಾಜಿಕ‌‌ ಜಾಲತಾಣದಲ್ಲಿ ‘ಬಾಸ್ ಬಾಸ್ ಯಾವ ಬಾಸ್’ ತಂದೆ-ತಾಯಿಗಳೆ ನಮಗೆ ಬಾಸ್ ಎನ್ನುವ ರೀಲ್ಸ್ ಮಾಡಿದ್ದಾನೆ. ಇದನ್ನು ಗಮನಿಸಿ‌ದ ದರ್ಶನ್ ಅಭಿಮಾನಿ‌ ಸಂಘದ ಅಧ್ಯಕ್ಷ ಹೋಟೆಲ್ ರಾಜು ಕೋಪಗೊಂಡು ದೂರವಾಣಿ ಕರೆ ಮಾಡಿ ಅಭಿಗೆ ಜೀವ ಬೆದರಿಕೆ ಹಾಕಿದ್ದಾನೆ. ನಿನ್ನ‌ ಅಂಗಡಿ ಹಾಗೂ ಮನೆ ಎರಡು ಸುಡುತ್ತೇನೆ ಎಂದು ಹೆದರಿಸಿದ್ದಾನೆ.

ತಂದೆ ತಾಯಿಗಳಿಗೆ ನೋಡಿ, ಅವರಿಗೆ ಬಕೆಟ್ ಹಿಡಿಯಿರಿ, ಯಾವ ಬಾಸೂ ಇಲ್ಲ‌ ಎನ್ನುವ ವಿಡಿಯೋ ವೈರಲ್ ಆಗಿದ್ದು, ಅದನ್ನು ಡಿಲಿಟ್ ಮಾಡುವಂತೆ ಜೀವ ಬೆದರಿಕೆ ಕರೆ ಮಾಡಿ ಮಾತನಾಡಿದ ಆಡಿಯೋ ಸಂಭಾಷಣೆ ವೈರಲ್ ಆಗುತ್ತಿದ್ದಂತೆ ನಗರ ಪೊಲೀಸರು ರಾಜುನನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next