Advertisement

School: ಯಡಮೊಗೆ ಶಾಲೆಗೆ ಬೀಗ ಹಾಕದೆ ಹೋದ ಮುಖ್ಯ ಶಿಕ್ಷಕ!

01:45 AM Nov 01, 2023 | Team Udayavani |

ಸಿದ್ದಾಪುರ: ಬೈಂದೂರು ವಲಯದ ಯಡಮೊಗೆ ಗ್ರಾಮದ ಅಜ್ಜಿಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಗಳವಾರ ಸಂಜೆ ಶಾಲೆ ಮುಗಿಸಿ ಸಂಜೆ ಮನೆಗೆ ಹೋಗುವಾಗ ಬೀಗ ಹಾಕದೇ ಬಾಗಿಲು ತೆರೆದಿಟ್ಟು ಮನೆಗೆ ಹೋದ ಘಟನೆ ಮಂಗಳವಾರ ನಡೆದಿದೆ.

Advertisement

ಸ್ಥಳೀಯರು ಕೊಠಡಿಗೆ ಬೀಗ ಹಾಕದಿದ್ದನ್ನು ಗಮನಿಸಿ, ಫೋಟೋ ತೆಗೆದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿದರು. ಸಾಮಾಜಿಕ ಜಾಲ ತಾಣದಲ್ಲಿಯೂ ಹರಿಯ ಬಿಟ್ಟರು.
ಅಜ್ಜಿಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರು ಇಲ್ಲ. ಒಬ್ಬರು ಅತಿಥಿ ಶಿಕ್ಷಕರು ಮತ್ತು ಶಂಕರ ನಾಯ್ಕ ಅವರು ಪ್ರಭಾರ ಮುಖ್ಯ ಶಿಕ್ಷಕರಾಗಿದ್ದಾರೆ. ಪ್ರಭಾರ ಮುಖ್ಯ ಶಿಕ್ಷಕ ಶಂಕರ ನಾಯ್ಕ ಅವರು ಮೊದಲಿನಿಂದಲೂ ಅಜ್ಜಿಕಾನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎನ್ನು ಆರೋಪ ಇದೆ. ಇದರ ಬಗ್ಗೆ ಯಡಮೊಗೆ ಗ್ರಾಮ ಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು. ಬೇಜವಾಬ್ದಾರಿ ತೋರಿದ ಪ್ರಭಾರ ಮುಖ್ಯ ಶಿಕ್ಷಕ ಶಂಕರ ನಾಯ್ಕ ಅವರನ್ನು ಕೆಲಸದಿಂದ ವಜಾಗೊಳಿಸಬೇಕು. ಇತಂಹವರಿಂದ ಸರಕಾರಿ ಶಾಲೆಯ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆ ಶಾಲೆಯಲ್ಲಿ ಖಾಯಂ ಶಿಕ್ಷಕರು ಇಲ್ಲ. ಒಬ್ಬರು ಅತಿಥಿ ಶಿಕ್ಷಕರು ಇರುವುದು. ಶಂಕರ ನಾಯ್ಕ ಈ ಪ್ರಭಾರ ಮುಖ್ಯ ಶಿಕ್ಷಕರು ಆಗಿದ್ದಾರೆ. ನಿರ್ಲಕ್ಷ್ಯ ತೋರಿದ್ದರಿಂದ ಪ್ರಭಾರ ಮುಖ್ಯ ಶಿಕ್ಷಕ ಶಂಕರ್‌ ನಾಯ್ಕ ಅವರಿಗೆ ನೋಟಿಸ್‌ ನೀಡಲಾಗುತ್ತದೆ ಎಂದು ಬೈಂದೂರು ಬಿಇಒ ನಾಗೇಶ್‌ ನಾಯ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next