Advertisement

ಯಾದಗಿರಿ : ಸಿಡಿಲಿಗೆ ಯುವಕ ಬಲಿ

08:14 PM Apr 29, 2021 | Team Udayavani |

ಯಾದಗಿರಿ : ಜಿಲ್ಲೆಯ  ಶಹಾಪುರ ತಾಲೂಕಿನ ತಿಪ್ಪನಹಳ್ಳಿ ಗ್ರಾಮದ ಯುವಕ ಸಿಡಿಲಿಗೆ ಬಲಿಯಾದ ಘಟನೆ ನಡೆದಿದೆ.

Advertisement

ಗ್ರಾಮದ ಹೋರ ವಲಯದಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಮೆಣಸಿನಕಾಯಿ ರಾಶಿಗೆ ಹೋದಿಸಲು ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸಂಜೆ ಜಿಲ್ಲೆಯ ಹಲವು ಕಡೆ ಗುಡುಗು, ಗಾಳಿ ಸಹಿತ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದ್ದು ಈ ವೇಳೆ ಐತೇಶಾಮ ಇಕ್ಬಾಲ್ ಸಾಬ್(16) ತಮ್ಮ ಮೆಣಸಿನಕಾಯಿ ರಾಶಿಯನ್ನು ನಾಶವಾಗುವುದನ್ನು ತಡೆಯಲು ಹೋಗಿ ಸಿಡಿಲಿನ ಆರ್ಭಟ ಕ್ಕೆ ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ ಸಂಗತಿ ಬೆಳಕಿಗೆ ಬಂದಿದೆ.

ಶಹಾಪುರ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next