Advertisement

ಸಾಲ ಭೀತಿ: ವಿಷ ಸೇವಿಸಿ ಯಾದಗಿರಿಯ ರೈತ ಆತ್ಮಹತ್ಯೆ

04:43 PM May 28, 2020 | keerthan |

ಯಾದಗಿರಿ: ಸಾಲ ಬಾದೆಯಿಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ ಘಟನೆ ಗುರುವಾರ ಹುಣಸಗಿಯ ಜಂಗಿನಗಡ್ಡಿಯಲ್ಲಿ ನಡೆದಿದೆ.

Advertisement

ಜಿಲ್ಲೆಯ ಹುಣಸಗಿ ತಾಲೂಕಿನ ಜಂಗಿನಗಡ್ಡಿ ಗ್ರಾಮದ ರೈತ ಸಿದ್ದಪ್ಪ ಹನುಮಪ್ಪ ಡೊಳ್ಳಿ (35) ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಜಂಗಿನಗಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಮೃತ ರೈತನ ತಂದೆಯ ಹೆಸರಲ್ಲಿ ನಾಲ್ಕು ಎಕರೆ ಜಮೀನು ಇದ್ದು ನಾರಾಯಣಪುರ ಸೊಸೈಟಿಯಲ್ಲಿ 17 ಸಾವಿರ ರೂ. ಸಾಲವಿದೆ ಹಾಗೂ ಮೃತ ರೈತ ಖಾಸಗಿಯಾಗಿ ಐದು ಲಕ್ಷ ಕೈ ಸಾಲ ಮಾಡಿದ್ದ ಎಂದು ಮೃತನ ತಂದೆ ಹನುಮಂತಪ್ಪ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next