Advertisement

ನಿಯಮ ಉಲ್ಲಂಘನೆ ಎರಡು ದೂರು ದಾಖಲು

12:13 PM Jul 03, 2020 | Naveen |

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಿಸಲಾಗಿದೆ. ಇಬ್ಬರು ವ್ಯಕ್ತಿಗಳು ಹೋಂ ಕ್ವಾರಂಟೈನ್‌ ಅವಧಿಯಲ್ಲಿ ಮನೆ ಬಿಟ್ಟು ಹೊರಗಡೆ ಉದ್ದೇಶಪೂರ್ವಕವಾಗಿ ಹೊರಗಡೆ ತಿರುಗಾಡಿದ್ದಾರೆ ಎನ್ನಲಾಗಿದೆ.

Advertisement

ಜೂ.28ರಂದು ಏವೂರ ತಾಂಡಾದ ತಿಪ್ಪಣ್ಣ ಪವಾರ ಹೊರಗಡೆ ಸಂಚರಿಸಿದ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನು ಅದೇ ದಿನ ಕೆಂಭಾವಿಯ ಲಕ್ಷ್ಮೀನಗರದ ವಸಂತ ಪೂರ್ಣಸಾಯಿ ಎನ್ನುವವರು ನಿಯಮ ಉಲ್ಲಂಘಿಸಿರುವುದರ ಕುರಿತು ಪುರಸಭೆ ಸಿಬ್ಬಂದಿ ದೂರಿನ ಹಿನ್ನೆಲೆ ಜು.1ರಂದು ಕೆಂಭಾವಿ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next