Advertisement

ರಾಷ್ಟೀಯ ಯುವ ಅಧ್ಯಕ್ಷರ ಮೇಲೆ ಹಲ್ಲೆ: ಮಮತಾ ಭಾವ ಚಿತ್ರಕ್ಕೆ BJP ಕಾರ್ಯಕರ್ತರ ಚಪ್ಪಲಿ ಸೇವೆ

08:25 PM Oct 08, 2020 | mahesh |

ರಾಷ್ಟೀಯ ಯುವ ಅಧ್ಯಕ್ಷರ ಮೇಲೆ ಹಲ್ಲೆಗೆ ಖಂಡನೆ: ಮಮತಾ ಚಿತ್ರಕ್ಕೆ ಬಿಜೆಪಿ ಕಾರ್ಯಕರ್ತರ ಚಪ್ಪಲಿ ಸೇವೆ
ಯಾದಗಿರಿ: ಕೋಲ್ಕತಾ ನಗರದ ಮೈದಾನದಲ್ಲಿ ಯುವ ಮೋರ್ಚಾ ರಾಷ್ಟೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯರವರ ನೇತೃತ್ವದಲ್ಲಿ ನಡೆದ ರ‍್ಯಾಲಿಗೆ ಅಡ್ಡಿಪಡಿಸಿ ನಾಡ ಬಾಂಬ್ ನ್ನು ಪ್ರಯೋಗಿಸಿದ ಟಿಎಂಸಿ ಗುಂಡಗಳು ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಭಂಗ ತಂದಿದ್ದಾರೆ ಇಂತಹ ನೀಚ ಕೆಲಸ ಮಾಡುವ ಗೂಂಡಾಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶರಣ ಭೂಪಾಲರೆಡ್ಡಿ ನಾಯ್ಕಲ್ ಹೇಳಿದರು.

Advertisement

ನಗರದ ಸುಭಾಷ್ ವೃತ್ತದಲ್ಲಿ ಯುವ ಮೋರ್ಚಾದಿಂದ ಆಯೋಜಿಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು, ಯುವ ಮೋರ್ಚಾ ಕಾರ್ಯಕರ್ತರು ಯಾರೂ ಧೃತಿಗೆಡಬಾರದ ಮುಂದೆ ಮುಂಬರುವ ವಿಧಾನಸಭೆಯಲ್ಲಿ ಟಿಎಂಸಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶಗೊಂಡ ಯುವ ಬಿಜೆಪಿ ಕಾರ್ಯಕರ್ತರು ಬ್ಯಾನರ್ ಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥನಾದ, ವೆಂಕಟರೆಡ್ಡಿ ಅಬ್ಬೆತುಮಕೂರು, ನಗರಸಭಾ ಸದಸ್ಯ ಹಣಮಂತ ಇಟ್ಟಿಗಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಗುರುಸುಣಿಗಿ, ಶರಣಗೌಡ ಐಕೂರ, ಕೃಷ್ಣಾರೆಡ್ಡಿ ಬಬಲಾದ, ವಿರೇಶ ಮುದ್ನಾಳ, ಮಲ್ಲು ಸ್ವಾಮಿ ಗುಡಿಮಠ, ಬಸುರಡ್ಡಿ ಹೆಡಗಿಮದ್ರಾ, ಶಿವು ಹುಣಸಿಗಿ, ಶರಣಗೌಡ, ಬಸು ಹುಗಾರ, ಪ್ರಜ್ವಲ್, ದೇವು ಮಡಿವಾಳ, ವಿಶ್ವರಾದ್ಯ ಸಣ್ಣಾಗರ, ಪ್ರಜ್ವಲ್ ಸೇರಿದಂತೆ ಅನೇಕ ಯುವ ಮೋರ್ಚಾ ಕಾರ್ಯಕರ್ತರು ಇದರು.

Advertisement

Udayavani is now on Telegram. Click here to join our channel and stay updated with the latest news.

Next