Advertisement

Kasaragod; ಹಾಸ್ಯ ಸಾಹಿತಿ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್‌ ನಿಧನ

11:36 AM Jun 24, 2024 | Team Udayavani |

ಕಾಸರಗೋಡು: ಹಾಸ್ಯ ಸಾಹಿತಿ ಕೊಟ್ಯಾಡಿ ಸಮೀಪದ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್‌ (82) ಜೂ. 21ರಂದು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ.

Advertisement

ಅವರು ಕೃಷಿಕರು, ಖ್ಯಾತ ಪಶು ನಾಟಿವೈದ್ಯ, ಯಕ್ಷಗಾನ ಕಲಾವಿದ ಹಾಗೂ ಜನಾನುರಾಗಿ ಹಾಸ್ಯ ಸಾಹಿತಿಯಾಗಿದ್ದರು. ಆಶು ಚುಟುಕು ರಚನೆ ಹವ್ಯಾಸವಾಗಿತ್ತು.

ಅವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿ, ಸುಳ್ಯದ ಚಂದನ ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸಮ್ಮಾನ, ಮೂಡುಬಿದಿರೆಯ ಆಳ್ವಾಸ್‌ ನುಡಿಸಿರಿಯಲ್ಲಿ ನಡೆದ ನಾಟಿವೈದ್ಯ ಸಮ್ಮೇಳನದಲ್ಲಿ ಸಮ್ಮಾನ ಸೇರಿದಂತೆ ಅನೇಕ ಕಡೆಗಳಲ್ಲಿ ಸಮ್ಮಾನಿತರಾಗಿದ್ದಾರೆ.

ಅವರ ರಚನೆಗಳು ಚುಟುಕು ರಸಾಯನ, ಹಳಬರ ಜೋಳಿಗೆ, ಹೂಬಾಣ, ನೇಸರ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next