Advertisement

ಕುಸ್ತಿಪಟು ಸತೀಶ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ದಿಲ್ಲಿ ಹೈಕೋರ್ಟ್‌

09:35 AM Sep 04, 2017 | Team Udayavani |

ಹೊಸದಿಲ್ಲಿ: ಕುಸ್ತಿಪಟು ಸತೀಶ್‌ ಕುಮಾರ್‌ ವಿರುದ್ಧ ಬೇಜವಾಬ್ದಾರಿಯುತ ನಿಷೇಧ ಕ್ರಮ ತೆಗೆದುಕೊಂಡ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್ಐ)ಕ್ಕೆ ದಿಲ್ಲಿ ಹೈಕೋರ್ಟ್‌ ಚಾಟಿ ಬೀಸಿದೆ. 25 ಲಕ್ಷ ರೂ.ಪರಿಹಾರ ನೀಡಬೇಕು ಎಂದು ರವಿವಾರ ಆದೇಶ ನೀಡಿದೆ. ಅಷ್ಟೇ ಅಲ್ಲ ಸತೀಶ್‌ ಕುಮಾರ್‌ ಭವಿಷ್ಯದ ಜತೆ ಚೆಲ್ಲಾಟ ಆಡಿರುವ ಅಧಿಕಾರಿ ವಿರುದ್ಧ ಭಾರತೀಯ ಕುಸ್ತಿ ಫೆಡರೇಶನ್‌ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ. ಮುಂದಿನ ದಿನಗಳಲ್ಲಿ ಇಂತಹದೊಂದು ಅಚಾತುರ್ಯ ಮತ್ತೆ ಮರುಕಳಿಸಬಾರದು ಎನ್ನುವುದನ್ನು ಕೋರ್ಟ್‌ ಇದೇ ವೇಳೆ ಸ್ಪಷ್ಟಪಡಿಸಿದೆ. ಅಲ್ಲದೆ ಕುರುಡು ಕಣ್ಣಿನಿಂದ ಕ್ರಮ ತೆಗೆದುಕೊಂಡ ಡಬ್ಲ್ಯುಎಫ್ಐ ವಿರುದ್ಧ ಕೋರ್ಟ್‌ ಟೀಕಾ ಪ್ರಹಾರ ಮಾಡಿದೆ. ಇದರಲ್ಲಿ ಸತೀಶ್‌ ಅವರದ್ದು ಏನೂ ತಪ್ಪಿಲ್ಲ. ಎಂದು ನ್ಯಾಯಾಲಯ  ಒಟ್ಟು 30 ಪುಟಗಳ ಸುದೀರ್ಘ‌ ವಿವರಣೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next