Advertisement
ಅವರೊಬ್ಬ ಅದ್ಭುತ ಕಲಾವಿದ. ಸುಮಾರು 28 ವರ್ಷಗಳಿಂದ ಕಲಾವೃತ್ತಿಯಲ್ಲಿರುವ ಅವರು 22 ವರ್ಷಗಳ ಹಿಂದೆ ಗಣಪತಿಯ ವಿಗ್ರಹ ನಿರ್ಮಿಸುವ ‘ಮನೋಜ್ಞ’ ಎನ್ನುವ ಆರ್ಟ್ ಮತ್ತು ಕ್ರಾಫ್ಟ್ ಕಲಾ ಶಾಲೆಯನ್ನು ತೆರೆದು ಆ ಮೂಲಕ ಸ್ವೋದ್ಯೋಗ ಆರಂಭಿಸಿದ್ದಾರೆ.
Related Articles
Advertisement
ಗೆಳೆಯರ ಸಹಾಯ
ಮೂಲತಃ ಕೇರಳದ ಉಪ್ಪಳದವರಾದ ಅವರು ಪುತ್ತೂರಿಗೆ ಬಂದು 40 ವರ್ಷಗಳಾಗಿದೆ. ಪತ್ನಿ ರಜನಿ, ಮಕ್ಕಳಾದ ಮನೋಜ್ಞ ಮತ್ತು ದ್ವಿತಿ, ಗೆಳೆಯರಾದ ಹರೀಶ್ ಆಚಾರ್ಯ ಮತ್ತು ಅರುಣ್ ಅವರು ಬಣ್ಣ ಹಚ್ಚಿ ಅವರ ಮೃಣ್ಮಯ ಮೂರ್ತಿಗಳಿಗೆ ಇನ್ನಷ್ಟು ಮೆರುಗು ನೀಡುತ್ತಿದ್ದಾರೆ.
ಈ ಬಾರಿ 48 ವಿಗ್ರಹ
ಈ ಬಾರಿ 48 ಗಣಪತಿಯ ವಿಗ್ರಹಗಳನ್ನು ತಯಾರಿಸಿರುವ ತಾರಣ್ಣನ ಪುಟ್ಟ ಅಂಗಡಿಯಲ್ಲಿ ತಮ್ಮ 8ನೇ ತರಗತಿಯ ಮಗ ಮನೋಜ್ಞ ಸಿದ್ಧಪಡಿಸಿದ ಎರಡು ಪುಟಾಣಿ ಗಣಪತಿಗಳೂ ಇವೆ ಎನ್ನುವುದು ಅವರಿಗೆ ಹೆಮ್ಮೆ. ಪ್ರತಿ ವರ್ಷವೂ ಸಮೀಪದ ಆಶ್ರಮವೊಂದಕ್ಕೆ ಉಚಿತವಾಗಿ ಗಣಪತಿಯ ಮೂರ್ತಿಯನ್ನು ನೀಡುವ ಅವರ ಗುರುಗಳ ಅಭ್ಯಾಸ ಉಳಿಸಿಕೊಂಡು ಬಂದಿದ್ದಾರೆ.
ಇಲ್ಲೆಲ್ಲ ತಾರಣ್ಣನ ಗಣಪ!
ಪುತ್ತೂರಿನ ವಿವೇಕಾನಂದ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಅಡೂರು ದೇಗುಲ, ಕಾವು ದೇಗುಲ, ಜಾಲ್ಸೂರು, ಸುಳ್ಯ, ಕಾವೇರಿಕಟ್ಟೆ , ರಾಘವೇಂದ್ರ ಮಠ ಸೇರಿದಂತೆ ನೆರೆಯ ರಾಜ್ಯದಿಂದಲೂ ಇವರ ಗಣಪನಿಗೆ ಭಾರೀ ಬೇಡಿಕೆ ಇದೆ. ಅವರ ಶಿಷ್ಯ ಸಮಾನರು ಗಣಪತಿ ಬಪ್ಪ ಮೋರೆಯಾ ಎನ್ನುವ ಸಂಘವನ್ನು ಕಟ್ಟಿಕೊಂಡು ಆ ಮೂಲಕವೂ ಚೌತಿ ಸಂಭ್ರಮವನ್ನು ಅಚರಿಸುತ್ತಿರುವುದು ಕಲಾಕಾರ ನೊಬ್ಬನ ಕಲೆಗೆ ಸಂದ ನಿಜವಾದ ಗೌರವ.
28 ವರ್ಷಗಳಿಂದ ಗಣಪತಿ ವಿಗ್ರಹ ನಿರ್ಮಾಣದಲ್ಲಿ ಸಿದ್ಧಹಸ್ತರಾಗಿದ್ದಾರೆ ತಾರಾನಾಥ ಆಚಾರ್ಯ.