Advertisement

ಕೋವಿಡ್  ನಿವಾರಣೆಗೆ ಬೊಡ್ಡೆಗಲ್ಲಿಗೆ ರುದ್ರಾಭಿಷೇಕ

03:07 PM May 30, 2021 | Team Udayavani |

ರಾಯಚೂರು: ದೇವದುರ್ಗ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದಲ್ಲಿ ಕೋವಿಡ್ ಮಹಾಮಾರಿಯಿಂದ ಸಾವು ನೋವು ಸಂಭವಿಸುತ್ತಿದ್ದು, ಸೋಂಕಿನಿಂದ ಮುಕ್ತಿ ಸಿಗಲಿ ಎಂದು ಗ್ರಾಮಸ್ಥರು ಬೊಡ್ಡೆಗಲ್ಲಿಗೆ ರುದ್ರಾಭಿಷೇಕ ಮಾಡಿ ಬೇಡಿಕೊಂಡಿದ್ದಾರೆ.

Advertisement

ಗ್ರಾಮಸ್ಥರು ಕೋವಿಡ್ ಭೀತಿಯಿಂದ ದೇವರ ಮೊರೆ ಹೋಗಿದ್ದಾರೆ. ಗ್ರಾಮದಲ್ಲಿ ಕೆಲ ದಿನಗಳಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿವೆ.

ಅದರ ಜತೆಗೆ ಐದಾರು ಜನ ಸಾವಿಗೀಡಾಗಿದ್ದು ಇಬ್ಬರು ಕೋವಿಡ್ ಗೆ ತುತ್ತಾಗಿರುವುದು ದೃಢವಾಗಿದೆ. ಇದರಿಂದ ಆತಂಕಗೊಂಡ ಜನ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  11 ದಿನ ನಂದಾದೀಪ ಹಚ್ಚುವುದರ ಜತೆಗೆ ಗ್ರಾಮದ ಬೊಡ್ಡೆಗಲ್ಲಿಗೆ ರುದ್ರಾಭಿಷೇಕ ನೆರವೇರಿಸಿದ್ದಾರೆ. ಇನ್ನಾದರೂ ಗ್ರಾಮದಲ್ಲಿ ಕೋವಿಡ್ ಹಾವಳಿ ನಿಲ್ಲಲಿ ಎಂದು ಬೇಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next