Advertisement
ಗೌರಿ ಹತ್ಯೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಹಲವು ಆಯಾಮಗಳಲ್ಲಿ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಪೋನ್ ಕರೆಗಳ ಜಾಡು ಹಿಡಿದು ತನಿಖೆ ಮುಂದುವರಿಸಿದ್ದಾರೆ. ಆದರೆ ಮಹಾರಾಷ್ಟ್ರ ವಿಚಾರವಾದಿ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಚಿಂತಕ ಎಂ.ಎಂ.ಕಲಬುರಗಿ ಹತ್ಯೆ ಹಾಗೂ ಗೌರಿ ಹತ್ಯೆಗೂ ಸಾಮ್ಯತೆಯಿದೆ ಎಂಬುದನ್ನು ಪತ್ತೆಹಚ್ಚಲು ಯತ್ನಿಸುತ್ತಿದ್ದಾರೆ.
Related Articles
Advertisement
ಎರಡೇ ಸೆಕೆಂಡ್ನಲ್ಲಿ ಗುಂಡು ಹಾರಿಸಿದ್ದ ದುಷ್ಕರ್ಮಿ!: ಗೌರಿಲಂಕೇಶ್ ಹತ್ಯೆಗೈದಿದ್ದಾರೆ ಎನ್ನಲಾದ ಇಬ್ಬರು ದುಷ್ಕರ್ಮಿಗಳು ಇರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಕೇವಲ ಐದು ಸೆಕೆಂಡ್ಗಳ ದೃಶ್ಯಗಳಲ್ಲಿ ದುಷ್ಕರ್ಮಿ ಎರಡು ಸೆಕೆಂಡ್ನಲ್ಲಿ ಗೌರಿಗೆ ನಾಲ್ಕು ಗುಂಡುಗಳನ್ನು ಹಾರಿಸುತ್ತಾನೆ. ಇನ್ನೆರೆಡು ಸೆಕೆಂಡ್ಗಳಲ್ಲಿ ಎಸ್ಕೇಪ್ ಆಗುತ್ತಾನೆ. ಅಲ್ಲದೆ ಸಿಸಿಟಿವಿ ಪೂಟೇಜ್ನಲ್ಲಿ ಸೆರೆಯಾಗಿರುವ ಬೈಕ್ಗೆ ನಂಬರ್ ಪ್ಲೇಟ್ ಇರಲಿಲ್ಲ.
ಅದೇ ಮಾದರಿಯ ಬೈಕ್ಗಳು ರಾಜ್ಯದಲ್ಲಿ 13 ಸಾವಿರ ಇವೆ. ಈ ಪೈಕಿ 500 ಬೈಕ್ಗಳನ್ನು ಪತ್ತೆ ಹಚ್ಚಲು ಇದುವರೆಗೂ ಸಾಧ್ಯವಾಗಿಲ್ಲ. ಇನ್ನು ಗೌರಿ ಹತ್ಯೆ ತನಿಖೆ ಭಾಗವಾಗಿ ಘಟನಾ ಸ್ಥಳದ ಸುತ್ತಮುತ್ತಲ ಪ್ರದೇಶದಲ್ಲಿ ಸೆಪ್ಟೆಂಬರ್ 1ರಿಂದ 5ರವರೆಗಿನ 70ದಶಲಕ್ಷಗಳಷ್ಟು ಫೋನ್ ಕರೆಗಳು ವಿನಿಮಯವಾಗಿವೆ. ತನಿಖೆಯ ಸಲುವಾಗಿ 20 ದಶಲಕ್ಷ ಕರೆಗಳನ್ನು ಪರಿಶೀಲಿಸಲಾಗಿದೆ. ಆದರೆ, ದುಷ್ಕರ್ಮಿಗಳ ಖಚಿತತೆ ಪತ್ತೆಯಾಗಿಲ್ಲ ಎಂದು ಅಧಿಕಾರಿ ತಿಳಿಸಿದರು.