Advertisement

ಮನುಕುಲದ ಉಳಿವಿಗೆ ಹವಾಮಾನವೇ ಶ್ರೀರಕ್ಷೆ: ಇಂದು ವಿಶ್ವ ಹವಾಮಾನ ದಿನ

12:36 AM Mar 23, 2021 | Team Udayavani |

ಇಂದು ವಿಶ್ವ ಹವಾಮಾನ ದಿನ. ಹವಾಮಾನ ನಮ್ಮ ದೈನಂದಿನ ಜೀವನದೊಂದಿಗೆ ಅಗಾಧವಾಗಿ ಬೆಸೆದುಕೊಂಡಿರುವ ಅಂಶವಾಗಿದೆ. ಹವಾಮಾನ ಸಹಜವಾಗಿದ್ದರೆ ಮಾತ್ರ ಮನುಷ್ಯ ಜೀವನ ಕೂಡ ಏರುಪೇರು ಇಲ್ಲದೆ ಸಹಜವಾಗಿರಲು ಸಾಧ್ಯ. ಅದೇ ಕೆಟ್ಟ ಹವಾಮಾನವಿದ್ದರೆ ಅವರ ದೈನಂದಿನ ಕೆಲಸ ಕಾರ್ಯಗಳು ವ್ಯತ್ಯಯವಾಗುತ್ತವೆ.

Advertisement

ದಿನದ ಹಿನ್ನೆಲೆ: 1950ರ ಮಾರ್ಚ್‌ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದ ದಿನವಾಗಿದೆ. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1950ರಲ್ಲಿ ಡಬ್ಲ್ಯುಎಂಒ ಆಗಿ ಬದಲಾಯಿತು.
ಈ ವರ್ಷ ದಿನದ ವಿಷಯವೆಂದರೆ ‘The ocean, our climate and weather’. ಹವಾಮಾನದ ವಿಷಯಕ್ಕೆ ಬಂದಾಗ ಸಾಗರವು ಇಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಭೂಮಿಯ ಮೇಲ್ಮೆ„ಯ ಶೇ. 70ರಷ್ಟು ಭಾಗವನ್ನು ಒಳಗೊಂಡಿದೆ.

ಅಪಾಯದಲ್ಲಿ ಸಾಗರ: ಶೇ. 90ರಷ್ಟು ಹೆಚ್ಚುವರಿ ಶಾಖವನ್ನು ಸಾಗರವು ಹೀರಿಕೊಳ್ಳುತ್ತದೆ. ಹೀಗಾಗಿ ಸಾಗರವು ಹವಾಮಾನ ಬದಲಾವಣೆಯ ಪರಿಣಾಮವಾಗಿ ಹೆಚ್ಚುತ್ತಿರುವ ತಾಪಮಾನದಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಸಾಗರ ತಾಪಮಾನ ಏರಿಕೆ ಮತ್ತು ಸಾಗರ ರಸಾಯನಶಾಸ್ತ್ರದಲ್ಲಿನ ಬದಲಾವಣೆಗಳು ಈಗಾಗಲೇ ಸಮುದ್ರ ಪರಿಸರ ವ್ಯವಸ್ಥೆಗಳನ್ನು ಕಲುಷಿತಗೊಳಿಸಿದೆ.

ದ್ವೀಪಗಳಿಗೆ ಅಪಾಯ: ಸಮುದ್ರ ಮಟ್ಟ ಏರಿಕೆ ಮತ್ತು ಹೆಚ್ಚು ತೀವ್ರವಾದ ಚಂಡಮಾರುತದ ಘಟನೆಗಳು ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಸಂಭವಿಸುವ ತೀವ್ರ ಸಮುದ್ರಮಟ್ಟದ ಘಟನೆಗಳ ಆವರ್ತನವನ್ನು ಹೆಚ್ಚಿಸುತ್ತದೆ. ಅನೇಕ ತಗ್ಗು ಪ್ರದೇಶದ ಕರಾವಳಿ ನಗರಗಳು ಮತ್ತು ಸಣ್ಣ ದ್ವೀಪಗಳಿಗೆ ಹೆಚ್ಚಿನ ಅಪಾಯಗಳನ್ನುಂಟುಮಾಡಲಿದೆ.

ಸುಸ್ಥಿರ ಅಭಿವೃದ್ಧಿಗೆ ಸಾಗರ ವಿಜ್ಞಾನ: ಸಮುದ್ರದ ಉಷ್ಣತೆ ವಿಪರೀತ ಹೆಚ್ಚಾದ ಪರಿಣಾಮ ಮಂಜುಗಡ್ಡೆ ಕರಗುತ್ತಿದೆ. 2020ರಲ್ಲಿ, ಆರ್ಕ್ಟಿಕ್ ಸಮುದ್ರದಲ್ಲಿ ಹಿಮದ ಪ್ರಮಾಣ ಕನಿಷ್ಠ ದಾಖಲೆಯಲ್ಲಿ ಕಡಿಮೆಯಾಗಿದೆ. 2100ರ ವೇಳೆಗೆ ಸಾಗರವು ನಾಲ್ಕು ಪಟ್ಟು ಹೆಚ್ಚಿನ ಶಾಖವನ್ನು ತೆಗೆದುಕೊಳ್ಳಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next