Advertisement
ಜಿಲ್ಲಾಡಳಿತ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಅರಿವು ಮೂಡಿಸಬೇಕಿದೆ: ಆರೋಗ್ಯ ಇಲಾಖೆಯೊಂದಿಗೆ ವಿದ್ಯಾರ್ಥಿಗಳು ಹಾಗೂಸಾರ್ವಜನಿಕರು ಕೈಜೋಡಿಸಬೇಕು. ಕ್ಷಯರೋಗದಲಕ್ಷಣವಿರುವವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆಹೋಗಲು ಶಿಫಾರಸು ಮಾಡಬೇಕು. ಕ್ಷಯರೋಗಪರೀಕ್ಷೆ ಹಾಗೂ ಚಿಕಿತ್ಸೆ ಉಚಿತವಾಗಿ ದೊರೆಯುತ್ತದೆ. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಷಯರೋಗದಿಂದ ಗುಣಮುಖರಾದವರು ಕ್ಷಯರೋಗ ಗುಣವಾದ ಬಗ್ಗೆತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಂತರಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ತಜಮುಲ್ಲಾ ಪಾಷಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ್, ಲಯನ್ಸ್ ಕ್ಲಬ್ ಅಧ್ಯಕ್ಷ ಆರ್.ಎಸ್.ಮಂಜುನಾಥ್, ವೈದ್ಯೆ ಡಾ.ಪ್ರಿಯಾಂಕ,ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಕರಿಯಪ್ಪ,ವನಜಾಕ್ಷಿ, ಪ್ರಭಾಕರ ಗೌಡ, ತಾಲೂಕು ಕ್ಷಯ ರೋಗನಿರ್ಮೂಲನ ಸಿಬ್ಬಂದಿಗಳಾದ ಯುವರಾಜ್, ಮಂಜುನಾಥ್ ಭಾಗವಹಿಸಿದ್ದರು.
ಕ್ಷಯರೋಗದ ಬಗ್ಗೆ ಭಯಪಡುವಅಗತ್ಯವಿಲ್ಲ. ಸರಿಯಾದ ಚಿಕಿತ್ಸೆಮೂಲಕ ಕ್ಷಯರೋಗದಿಂದಸಂಪೂರ್ಣವಾಗಿ ಗುಣಮುಖರಾಗಬಹುದಾಗಿದ್ದು, ಸಮುದಾಯ ಸರ್ಕಾರದೊಂದಿಗೆ ಕೈಜೋಡಿಸಿ ಕ್ಷಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು. –ಹುಲಿಕಲ್ ನಟರಾಜ್, ಜಿಲ್ಲಾ ಕ್ಷಯ ನಿರ್ಮೂಲನೆ ಜಾಗೃತಿ ರಾಯಭಾರಿ