Advertisement

ಕ್ಷಯ ನಿರ್ಮೂಲನೆಗೆ ಸಹಕಾರ ಅಗತ್ಯ

12:37 PM Mar 26, 2021 | Team Udayavani |

ದೊಡ್ಡಬಳ್ಳಾಪುರ: ಕ್ಷಯ ರೋಗಿಗಳ ಸಂಖ್ಯೆ ಇಳಿಮುಖವಾಗಿದ್ದರೂ ವಿಶ್ವದಲ್ಲಿ ಭಾರತವು ಅತಿಹೆಚ್ಚು ಕ್ಷಯ ರೋಗಿಗಳನ್ನು ಹೊಂದಿದೆ. ಕಾಲ ಘಟಿಸುತ್ತಿದೆ-ಕ್ಷಯ ರೋಗ ನಿರ್ಮೂಲನೆಗೆ ಇದು ಈ ವರ್ಷದ ಧ್ಯೇಯವಾಕ್ಯವಾಗಿದ್ದು, ಕ್ಷಯ ರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯೊಂದಿಗೆ ಸಮುದಾಯದ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಕ್ಷಯರೋಗನಿಯಂತ್ರಣಾಧಿಕಾರಿ ಡಾ.ಶಕೀಲಾ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 1200 ಮಂದಿಗೆ: ದೇಶದಲ್ಲಿ 27 ಲಕ್ಷ, ರಾಜ್ಯದಲ್ಲಿ 80 ಸಾವಿರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1200 ಕ್ಷಯ ರೋಗಿಗಳಿದ್ದಾರೆ. 100ಕ್ಕೆ 60 ಜನರಲ್ಲಿ ಕ್ಷಯರೋಗದ ಬ್ಯಾಕ್ಟೀರಿಯಾ ಇರಬಹುದು. ರೋಗ ನಿರೋಧಕ ಶಕ್ತಿ ಕಡಿಮೆ, ಅಪೌಷ್ಟಿಕತೆ,ತಂಬಾಕು ಸೇವನೆ ಮೊದಲಾದ ಕಾರಣಗಳಿಂದಾಗಿರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದರು.

ಕ್ಷಯರೋಗವು ಗಾಳಿಯಲ್ಲಿ ಬಹುಬೇಗ ಹರಡುವಕಾಯಿಲೆಯಾಗಿದ್ದು, ಎರಡು ವಾರ ಅಥವಾ ಅದಕ್ಕಿಂತಮೇಲ್ಪಟ್ಟು ಸತತ ಕೆಮ್ಮು, ಸಂಜೆ ವೇಳೆ ಜ್ವರ, ತೂಕಕಡಿಮೆಯಾಗುವುದು ಪ್ರಮುಖ ಲಕ್ಷಣಗಳಾಗಿದ್ದು,ವೈದ್ಯರು ಹೇಳುವವರೆಗೆ ಸಂಪೂರ್ಣ ಚಿಕಿತ್ಸೆ ಪಡೆದರೆ ಮಾತ್ರ ಕ್ಷಯ ರೋಗ ಸಂಪೂರ್ಣ ಗುಣಮುಖವಾಗಲು ಸಾಧ್ಯ ಎಂದರು.

ನಿರ್ಮೂಲನೆ ಗುರಿ: ಕ್ಷಯರೋಗಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. 1,892ರಲ್ಲಿ ರಾಬರ್ಟ್‌ಕೋಕ್‌ ಕ್ಷಯ ರೋಗ ಉಂಟು ಮಾಡುವಬ್ಯಾಕ್ಟೀರಿಯಾ ಪತ್ತೆ ಹಚ್ಚಿದ ನೆನಪಿಗಾಗಿ ಕ್ಷಯರೋಗದಿನಾಚರಣೆ ಆಚರಿಸಲಾಗುತ್ತಿದೆ. ಕಾಲಘಟಿಸುತ್ತಿದೆ-ಕ್ಷಯ ರೋಗ ನಿರ್ಮೂಲನೆಗೆ ಇದುಈ ವರ್ಷದ ಧ್ಯೇಯವಾಕ್ಯವಾಗಿದ್ದು, 2025ರ ವೇಳೆಗೆಕ್ಷಯರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆಮಾಡುವ ಗುರಿ ಹೊಂದಲಾಗಿದೆ ಎಂದರು.

Advertisement

ಅರಿವು ಮೂಡಿಸಬೇಕಿದೆ: ಆರೋಗ್ಯ ಇಲಾಖೆಯೊಂದಿಗೆ ವಿದ್ಯಾರ್ಥಿಗಳು ಹಾಗೂಸಾರ್ವಜನಿಕರು ಕೈಜೋಡಿಸಬೇಕು. ಕ್ಷಯರೋಗದಲಕ್ಷಣವಿರುವವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆಹೋಗಲು ಶಿಫಾರಸು ಮಾಡಬೇಕು. ಕ್ಷಯರೋಗಪರೀಕ್ಷೆ ಹಾಗೂ ಚಿಕಿತ್ಸೆ ಉಚಿತವಾಗಿ ದೊರೆಯುತ್ತದೆ. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಷಯರೋಗದಿಂದ ಗುಣಮುಖರಾದವರು ಕ್ಷಯರೋಗ ಗುಣವಾದ ಬಗ್ಗೆತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಂತರಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ತಜಮುಲ್ಲಾ ಪಾಷಾ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ್‌, ಲಯನ್ಸ್‌ ಕ್ಲಬ್‌ ಅಧ್ಯಕ್ಷ ಆರ್‌.ಎಸ್‌.ಮಂಜುನಾಥ್‌, ವೈದ್ಯೆ ಡಾ.ಪ್ರಿಯಾಂಕ,ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಕರಿಯಪ್ಪ,ವನಜಾಕ್ಷಿ, ಪ್ರಭಾಕರ ಗೌಡ, ತಾಲೂಕು ಕ್ಷಯ ರೋಗನಿರ್ಮೂಲನ ಸಿಬ್ಬಂದಿಗಳಾದ ಯುವರಾಜ್, ಮಂಜುನಾಥ್‌ ಭಾಗವಹಿಸಿದ್ದರು.

ಕ್ಷಯರೋಗದ ಬಗ್ಗೆ ಭಯಪಡುವಅಗತ್ಯವಿಲ್ಲ. ಸರಿಯಾದ ಚಿಕಿತ್ಸೆಮೂಲಕ ಕ್ಷಯರೋಗದಿಂದಸಂಪೂರ್ಣವಾಗಿ ಗುಣಮುಖರಾಗಬಹುದಾಗಿದ್ದು, ಸಮುದಾಯ ಸರ್ಕಾರದೊಂದಿಗೆ ಕೈಜೋಡಿಸಿ ಕ್ಷಯವನ್ನು ಹೋಗಲಾಡಿಸಲು ಪ್ರಯತ್ನಿಸಬೇಕು. ಹುಲಿಕಲ್‌ ನಟರಾಜ್‌, ಜಿಲ್ಲಾ ಕ್ಷಯ ನಿರ್ಮೂಲನೆ ಜಾಗೃತಿ ರಾಯಭಾರಿ

Advertisement

Udayavani is now on Telegram. Click here to join our channel and stay updated with the latest news.

Next