Advertisement

ಚನ್ನಪಟ್ಟಣ ಗೊಂಬೆಗೆ ವಿಶ್ವ ಮಾನ್ಯತೆ : ಆನ್‌ಲೈನ್‌ ಮೂಲಕ ವಿಶ್ವಕ್ಕೆ ಪರಿಚಯ

01:50 AM Feb 28, 2021 | Team Udayavani |

ಚನ್ನಪಟ್ಟಣ: ಪಾರಂಪರಿಕ ಗೊಂಬೆ ಉದ್ಯಮದಲ್ಲಿ ಹೊಸ ಆಲೋಚನೆ, ಹೊಸತನವನ್ನು ಅಳವಡಿಸಿಕೊಂಡು ವಿಶ್ವದ ಮಕ್ಕಳನ್ನು ಸೆಳೆಯುವ ಗೊಂಬೆಗಳನ್ನು ಆವಿಷ್ಕರಿಸುವಂತೆ ಪ್ರಧಾನಿ ಮೋದಿ ಗೊಂಬೆ ತಯಾರಕರಿಗೆ ಸಲಹೆ ನೀಡಿದ್ದಾರೆ.
ಆತ್ಮನಿರ್ಭರ ಭಾರತ ಯೋಜನೆಯಡಿ ಶನಿವಾರ ಆರಂಭವಾದ “ದಿ ಇಂಡಿಯಾ ಟಾಯ್ಸ್ ಫೇರ್‌ 2021′ ವರ್ಚುವಲ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೋದಿ, ಚನ್ನಪಟ್ಟಣವೂ ಸೇರಿದಂತೆ ದೇಶದ ಗೊಂಬೆ ತಯಾರಕರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.

Advertisement

ಚನ್ನಪಟ್ಟಣದ ಗೊಂಬೆಗಳನ್ನು ಕೇವಲ ಆ ಕ್ಷೇತ್ರ, ರಾಜ್ಯ, ರಾಷ್ಟ್ರಕ್ಕೆ ಸೀಮಿತಗೊಳಿಸದೆ ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಭರವಸೆ ನೀಡಿರುವ ಮೋದಿ, ಈ ನಿಟ್ಟಿನಲ್ಲಿ ಬೆಂಗಳೂರಿನ ಐಟಿ ಉದ್ಯಮಿಗಳು ಮತ್ತು ಸ್ಟಾರ್ಟ್‌ ಅಪ್‌ಗ್ಳ ಜತೆ ಕರಕುಶಲಕರ್ಮಿಗಳಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರಕಾರದ ಜತೆ ಚರ್ಚಿಸಿ ಮುನ್ನಡೆಯುತ್ತೇವೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಖುದ್ದು ನಿಗಾ ವಹಿಸಲಿದೆ ಎಂದಿದ್ದಾರೆ.

ಸ್ಪರ್ಧೆ ಆಯೋಜಿಸಿ
ಚನ್ನಪಟ್ಟಣದಲ್ಲಿ ಗೊಂಬೆ ಉದ್ಯಮದಲ್ಲಿ ತೊಡಗಿರುವ 2 ಸಾವಿರ ಮಂದಿಗೆ ಒಂದು ಸ್ಪರ್ಧೆ ಆಯೋಜಿಸಬೇಕು. ಯಾರು ಹೊಸ ವಿಧಾನದಲ್ಲಿ ಗೊಂಬೆ ಉತ್ಪಾದನೆ ಮಾಡುತ್ತಾರೆಯೋ ಅವರಿಗೆ ಬಹುಮಾನ ನೀಡುವ ಮೂಲಕ ಹೊಸ ಪ್ರಯತ್ನಗಳು ಮಾರುಕಟ್ಟೆಗೆ ಬರುವಂತೆ ಮಾಡಿ ಎಂದು ಮೋದಿ ಸಲಹೆ ನೀಡಿದರು.

ಹೊಸ ಗೊಂಬೆಗಳ ಆವಿಷ್ಕಾರ
ಗೊಂಬೆ ಉದ್ಯಮವನ್ನು ಇ-ಮಾರುಕಟ್ಟೆ ಮುಖಾಂತರ ವಿಶ್ವಕ್ಕೆ ತಲುಪಿಸಬೇಕೆನ್ನುವ ಆಲೋಚನೆಯನ್ನು ಮಾಡಿದ್ದೀರಾ ಎಂದು ಪ್ರಧಾನಿ ಪ್ರಶ್ನಿಸಿದರು. ಹೊಸ ಮಾದರಿಯ ಗೊಂಬೆಗಳ ಆವಿಷ್ಕಾರ ಆಗಬೇಕಿದೆ ಎಂದು ಹುರಿದುಂಬಿಸಿದರು.

ಹೊಸ ಆವಿಷ್ಕಾರ ಮಾಡುತ್ತೇವೆ
ಚನ್ನಪಟ್ಟಣದ ಗೊಂಬೆಗಳ ಬಗ್ಗೆ ಪ್ರಧಾನಿಗೆ ವಿವರ ನೀಡಿದ ಪ್ರತಿನಿಧಿ ಕೌಸರ್‌ ಪಾಷಾ, ಚನ್ನಪಟ್ಟಣದಲ್ಲಿ ಸುಮಾರು 2 ಸಾವಿರ ಕರಕುಶಲ ಕರ್ಮಿಗಳು 200 ವರ್ಷಗಳಿಂದ ಗೊಂಬೆ ತಯಾರಿಯಲ್ಲಿ ತೊಡಗಿದ್ದಾರೆ. ಈ ಬೊಂಬೆಗಳು ರಾಸಾಯನಿಕಗಳನ್ನು ಬಳಸದೆ ತಯಾರಾಗುತ್ತವೆ. ಶೇ. 80ರಷ್ಟು ಮಂದಿ ಪುರುಷರು, ಶೇ. 20ರಷ್ಟು ಮಹಿಳೆಯರು ಈ ಉದ್ಯಮದಲ್ಲಿದ್ದಾರೆ. ಈಗ ಕೇಂದ್ರ ಸರಕಾರ ನಮ್ಮ ಬೆಂಬಲಕ್ಕೆ ನಿಂತಿರುವುದು ಹೊಸ ಭರವಸೆ ಮೂಡಿಸಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next