Advertisement

World Cup 2023; ‘ಮುನಿಸೇತಕೆ ಗೆಳೆಯ…’: ವಿರಾಟ್ ಬಗ್ಗೆ ನವೀನ್ ಉಲ್ ಹಕ್ ಹೇಳಿದ್ದೇನು?

01:33 PM Oct 12, 2023 | Team Udayavani |

ಹೊಸದಿಲ್ಲಿ: ಭಾರತ ಮತ್ತು ಅಫ್ಘಾನಿಸ್ಥಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯವು ಬುಧವಾರ ಹೊಸದಿಲ್ಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದಿದೆ.  ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ ಗಳ ಅಂತರದ ಸುಲಭ ಗೆಲುವು ಸಾಧಿಸಿದೆ.

Advertisement

ಈ ಪಂದ್ಯವು ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮುಖಾಮುಖಿಯ ಕಾರಣದಿಂದ ಬಹಳಷ್ಟು ಹೈಪ್ ಪಡೆದಿತ್ತು. ಕಳೆದ ಐಪಿಎಲ್ ನಲ್ಲಿ ಆರ್ ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯದ ವೇಳೆ ವಿರಾಟ್ ಮತ್ತು ನವೀನ್ ಮೈದಾನದಲ್ಲಿ ಜಗಳವಾಡಿದ್ದರು. ಅದಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಮೊದಲ ಮುಖಾಮುಖಿಯಾಗಿತ್ತು.

ಅಲ್ಲದೆ ನವೀನ್ ಹೊದಲ್ಲೆಲ್ಲಾ ವಿರಾಟ್ ಅಭಿಮಾನಿಗಳು ಕೊಹ್ಲಿ ಹೆಸರು ಕೂಗಿ ಕಿಚಾಯಿಸುತ್ತಿದ್ದರು. ಹೊಸದಿಲ್ಲಿಯ ಪಂದ್ಯದಲ್ಲಿಯೂ ಇದು ಪುನರಾವರ್ತನೆಯಾಗಿತ್ತು. ಅಲ್ಲದೆ ವಿರಾಟ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬೌಲಿಂಗ್ ಮಾಡಲು ಬಂದು ನವೀನ್ ಗೆ ಮತ್ತೆ ಅಭಿಮಾನಿಗಳು ಜೋರಾಗಿ ಕಿಚಾಯಿಸಿದರು.

ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ವಿರಾಟ್ ಸ್ಟ್ಯಾಂಡ್ ನತ್ತ ನೋಡಿ ಸುಮ್ಮನಿರುವಂತೆ ಅಭಿಮಾನಿಗಳಿಗೆ ಸೂಚಿಸಿದರು. ಬಳಿಕ ಕೊಹ್ಲಿ ಬಳಿ ಬಂದ ನವೀನ್ ಕೈಕುಲಿಕಿದರು. ಬಳಿಕ ಪರಸ್ಪರ ತಬ್ಬಿಕೊಂಡು ಈ ಜಗಳ ಇಲ್ಲಿಗೆ ಸಾಕು ಎನ್ನುವಂತೆ ಮಾತನಾಡಿದರು. ಈ ವಿಡಿಯೋ ಸಖತ್ ವೈರಲ್ ಆಗಿದೆ.

Advertisement

ಪಂದ್ಯದ ಬಳಿಕ ಮಾತನಾಡಿದ ನವೀನ್ ಉಲ್ ಹಕ್, “ಅವರು ಒಳ್ಳೆಯ ವ್ಯಕ್ತಿ, ಉತ್ತಮ ಆಟಗಾರ ಮತ್ತು ನಾವು ಕೈಕುಲುಕಿದೆವು. ನಮ್ಮ ನಡುವೆ ಮೈದಾನದ ಹೊರಗೆ ಏನೂ ಇರಲಿಲ್ಲ. ಜನರು ಅದನ್ನು ದೊಡ್ಡದು ಮಾಡುತ್ತಾರೆ. ನಾವು ಇದನ್ನು ಮುಗಿಸುವ ಎಂದು ಅವರು ಹೇಳಿದರು ಮತ್ತು ನಾನು ಹೌದು ನಾವು ಅದನ್ನು ಮುಗಿಸಿದ್ದೇವೆ ಎಂದು ಹೇಳಿದೆ. ನಾವು ಕೈಕುಲುಕಿದೆವು ಮತ್ತು ತಬ್ಬಿಕೊಂಡೆವು” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next