Advertisement

ಅಮರಾವತಿಗೆ ಸಾಲ ಇಲ್ಲ: ವಿಶ್ವಬ್ಯಾಂಕ್‌

01:22 AM Jul 20, 2019 | Team Udayavani |

ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ 2,000 ಕೋಟಿ ರೂ. ಸಾಲ ನೀಡಬೇಕಿದ್ದ ವಿಶ್ವಬ್ಯಾಂಕ್‌, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಮರಾವತಿ ನಿರ್ಮಾಣಕ್ಕೆ ಸಾಲ ನೀಡುವಂತೆ ಭಾರತ ಸರ್ಕಾರ ತಾನು ಈ ಹಿಂದೆ ಸಲ್ಲಿಸಿದ್ದ ಮನವಿಯನ್ನು ಹಿಂಪಡೆದಿರುವುದರಿಂದ ನಿರ್ಧಾರ ಬದಲಿಸಲಾಗಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

Advertisement

ಕಾರಣವೇನು?: ಮೂಲಗಳ ಪ್ರಕಾರ, ಈ ಹಿಂದೆ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ಸರ್ಕಾರ, ಅಮರಾವತಿ ನಿರ್ಮಾಣಕ್ಕಾಗಿ ಜಮೀನು ಕೊಡಲೊಪ್ಪದ ರೈತರನ್ನು ಬೆದರಿಸಿ ಅಕ್ರಮವಾಗಿ ಅವುಗಳನ್ನು ಪಡೆದಿದೆ ಎಂಬ ದೂರುಗಳು ಕೇಳಿಬಂದಿದ್ದವು. ಹಾಗಾಗಿ, ದೂರುಗಳ ತನಿಖೆಗೆ ವಿಶ್ವಬ್ಯಾಂಕ್‌ ಮುಂದಾಗಿತ್ತು. ಅದು ಕೇಂದ್ರ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಾಗಾಗಿ, ಅದು ಮನವಿಯನ್ನು ಹಿಂಪಡೆದಿದೆ ಎನ್ನಲಾಗಿದೆ.

ವಾಕ್ಸಮರ: ವಿಶ್ವಬ್ಯಾಂಕ್‌ನ ಹೊಸ ನಿರ್ಧಾರ, ಆಂಧ್ರದ ವಿಪಕ್ಷ ಟಿಡಿಪಿ ಹಾಗೂ ವೈಎಸ್‌ಆರ್‌ಸಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ವಿಶ್ವಬ್ಯಾಂಕ್‌ ಮನವೊಲಿಸುವಲ್ಲಿ ವೈಎಸ್‌ಆರ್‌ಸಿ ವಿಫ‌ಲವಾಗಿದೆ ಎಂದು ಟಿಡಿಪಿ ದೂರಿದ್ದರೆ, ಈ ಎಲ್ಲಾ ವಿದ್ಯಮಾನಗಳಿಗೆ ನಾಯ್ಡು ಕಾರಣ ಎಂದು ಟಿಡಿಪಿ ವಿರುದ್ಧ ಸರ್ಕಾರ ಹರಿಹಾಯ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next