Advertisement

ಕ್ಯಾನ್ಸರ್‌ ಕುರಿತು ಕಾರ್ಯಾಗಾರ

04:20 PM Feb 03, 2018 | Team Udayavani |

ಕ್ಯಾನ್ಸರ್‌ ಎಂಬ ಮಹಾಮಾರಿಯಿಂದ ಲಕ್ಷಾಂತರ ಮಂದಿ ಬಳಲುತ್ತಿದ್ದಾರೆ. ಈ ರೋಗದ ತೀವ್ರತೆ ಬಹಳ ಭೀಕರ. ಕ್ಯಾನ್ಸರ್‌ನಿಂದ ರೋಗಿ ದೈಹಿಕವಾಗಿ ನೋವು ತಿಂದರೆ, ಆತನ ಆಪ್ತರು ಆರ್ಥಿಕ ಮತ್ತು ಮಾನಸಿಕವಾಗಿ ನೋವನುಭವಿಸುತ್ತಾರೆ.

Advertisement

ಹಾಗಾಗಿ ಕ್ಯಾನ್ಸರ್‌ನ ಲಕ್ಷಣಗಳು, ಚಿಕಿತ್ಸೆಯ ಬಗ್ಗೆ ಸರಿಯಾದ ಅರಿವು ಅಗತ್ಯ. ಈ ಬಾರಿಯ ವಿಶ್ವ ಕ್ಯಾನ್ಸರ್‌ ದಿನದ (ಫೆ.4) ಅಂಗವಾಗಿ ರೋಗದ ಕುರಿತು ಅರಿವು ಮತ್ತು ಮಾಹಿತಿ ನೀಡುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕರುಣಾಶ್ರಯ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಭಾರತೀಯ ವಿದ್ಯಾಭವನ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಾಗಾರ ನಡೆಯುತ್ತಿದ್ದು, ದೇಶ- ವಿದೇಶದ ಪ್ರಸಿದ್ಧ ವೈದ್ಯರು, ತಜ್ಞರು ಭಾಗವಹಿಸಲಿದ್ದಾರೆ. 

ಎಲ್ಲಿ?: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್‌ ರಸ್ತೆ
ಯಾವಾಗ?: ಫೆ.4, ಭಾನುವಾರ ಬೆಳಗ್ಗೆ 9.15
ಸಂಪರ್ಕ: 9739801877

Advertisement

Udayavani is now on Telegram. Click here to join our channel and stay updated with the latest news.

Next