Advertisement

ಪ್ರಾಮಾಣಿಕವಾಗಿ ಕೆಲಸ ಮಾಡಿ: ಶಾಸಕ

05:41 AM May 23, 2020 | Lakshmi GovindaRaj |

ತುಮಕೂರು: ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪ ಯೋಗ ಮಾಡಿಕೊಳ್ಳಬೇಡ, ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕ ವಾಗಿ ಮಾಡಿ, ಜನರನ್ನು ಕಚೇರಿಗೆ ಅಲೆಸುವುದನ್ನು ನಾನು ಸಹಿಸುವುದಿಲ್ಲ ಎಂದು ಗ್ರಾಮಾಂ ತರ  ಶಾಸಕ ಡಿ.ಸಿ.ಗೌರಿ ಶಂಕರ್‌ ಅಧಿಕಾರಿ ಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊ ದಿಗೆ ಪ್ರಗತಿ ಪರಿಶೀಲಿಸಿ ಮಾತನಾಡಿದರು.

Advertisement

ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ  ನೀರಿನ ಸಮಸ್ಯೆ ಬರಬಾರದು, ಕುಡಿ ಯುವ ನೀರಿನ ಸಮಸ್ಯೆ ಯಿರುವ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯ ಬೇಕು, ಶಾಸಕ ಅನುದಾನದಲ್ಲಿ ಪ್ರತಿ ಜಿಪಂ ವ್ಯಾಪ್ತಿಯಲ್ಲಿ ಮೂರು ಕೊಳವೆ ಬಾವಿ ಕೊರೆಯುವಂತೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ 26‰ ಮಂದಿ ಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಆಯಾ ಗ್ರಾಪಂ ವ್ಯಾಪ್ತಿ ಯವರನ್ನು ಅಲ್ಲಿಯೇ ಕ್ವಾರಂಟೈನ್‌ ಮಾಡ ಲಾಗಿದೆ ಎಂದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್‌ ಶಾಸಕರಿಗೆ ಮಾಹಿತಿ ನೀಡಿ ದರು. ಅಲೆಮಾರಿ ಗಳಿಗೆ ಮನೆ ಹಾಗೂ ನಿವೇಶನ ನೀಡಲು ಕ್ರಮವಹಿಸುವು ದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು. ತುಮಕೂರು,  ಚಿತ್ರದುರ್ಗ ಜಿಲ್ಲೆಯನ್ನು ಪೈಲೆಟ್‌ ಆಗಿ ಆಯ್ಕೆ ಮಾಡಿದ್ದು ಅಲೆಮಾರಿ ಸಮುದಾಯಗಳಿಗೆ ಮನೆ ಹಾಗೂ ನಿವೇಶನ ಹಂಚಲು ನಿರ್ಧರಿಸಲಾಗಿ ದ್ದು, ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವರ ಪಟ್ಟಿಯನ್ನು ಸಿದಪಂ ಇಒಗಳಿಗೆ ಸೂಚನೆ ನೀಡಿದರು.

ಆಶ್ರಯ ಯೋಜನೆಯಡಿ ನಿವೇಶನ ಹಂಚಲು ಭೂಮಿ ಪರಿಶೀಲನೆ ಕೈಗೊಳ್ಳ  ಬೇಕು ಎಂದು ತಹಶೀಲ್ದಾರ್‌ ಗೆ ಸೂಚನೆ ನೀಡಿದರು, ಈಗಾಗಲೇ ಹಲವು ಗ್ರಾಮ ಪಂಚಾಯತಿಗಳಲ್ಲಿ ಭೂಮಿ ಪರಿಶೀಲನೆ  ಮಾಡಿ ನಕ್ಷೆಯನ್ನು ಸಿದನಂತರ ಸರ್ಕಾರ ಕಳುಹಿಸಲಾಗುವುದು ಎಂದು ಶಾಸಕರಿಗೆ ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆಯಡಿ ಓಆರ್‌ ಎಫ್ ಅಡಿಯಲ್ಲಿ ರಸ್ತೆ  ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು,

ಕಾಮ ಗಾರಿ ಆರಂಭಿಸಿರುವ ಕಾಮಗಾರಿಗಳನ್ನು ಕೈಗೊಳ್ಳಬೇಕು, ಕೊರೊನಾ ಹಿನ್ನೆಲೆಯಲ್ಲಿ ನಿಂತಿರುವ ಕಾಮಗಾರಿಗೆ ಚಾಲನೆ ನೀಡಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು  ಎಂದು ಪಿಡಬ್ಲೂಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಈ ವೇಳೆ ರೇಷ್ಮೆ ಇಲಾಖೆ, ಪಶು  ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next