Advertisement

ಕೋವಿಡ್ ತಡೆಗೆ ಶ್ರಮಿಸಿ: ಸಿರಾಜ್‌ ಶೇಖ್‌

07:07 AM May 12, 2020 | Suhan S |

ಸಂಡೂರು: ಕೋವಿಡ್ ತಡೆಯಲು ಪ್ರತಿಯೊಬ್ಬರೂ ಶ್ರಮಿಸಬೇಕು, ಅದರಲ್ಲಿ ಸಂಕಷ್ಟಕ್ಕೆ ಸಿಲುಕಿದ, ಕೋವಿಡ್  ವಾರಿಯರ್ನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕಾಂಗ್ರೆಸ್‌ ಟಾಸ್ಕ್ಫೋರ್ಸ್‌ ಅಧ್ಯಕ್ಷ ಸಿರಾಜ್‌ ಶೇಖ್‌ ಹೇಳಿದರು.

Advertisement

ಅವರು ಪಟ್ಟಣದಲ್ಲಿ ಸ್ಮಯೋರ್‌ ಕಂಪನಿ ವತಿಯಿಂದ ಕೋವಿಡ್ ವಾರಿಯರ್ಸ್ ಗೆ ಸನ್ಮಾನ ಮತ್ತು ಬಡವರಿಗೆ ಆಹಾರಧಾನ್ಯ ವಿತರಿಸಿ ಮಾತನಾಡಿದರು. ಸ್ಮಯೋರ್‌ ಕಂಪನಿ ಮುಖ್ಯಸ್ಥರು ಹಾಗೂ ಎಂ.ವೈ. ಘೋರ್ಪಡೆಯವರ ಮೊಮ್ಮಗ ಬೆಹಾರ್ಜಿ ಘೋರ್ಪಡೆ ಮಾತನಾಡಿ, ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಸ್ಮಯೋರ್‌ ಕಂಪನಿ ಉಚಿತವಾಗಿ ಆಹಾರ ಧಾನ್ಯ ನೀಡುತ್ತಿದೆ. ಅದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು. ಪಟ್ಟಣಲ್ಲಿ 300ಕ್ಕೂ ಹೆಚ್ಚು ಕುಟುಂಬಗಳಿಗೆ, ಯಶವಂತನಗರ, ಬಂಡ್ರಿ ಇತರ ಗ್ರಾಮಗಳಲ್ಲಿಯೂ ಸಹ ವಿತರಣೆ ನಡೆಸಿದರು.

ವೈದ್ಯರಾದ ಡಾ| ರಾಮಶೆಟ್ಟಿ, ಜಿಲಾನ್‌ ಸಾಬ್‌, ಸ್ಮಯೋರ್‌ ಕಂಪನಿ ಅಧಿಕಾರಿಗಳು, ಸಿಬ್ಬಂದಿ ಕೊರೊನಾ ವಾರಿಯರ್ಸ್ ಗೆ ಕಿಟ್‌ ನೀಡಿ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next