Advertisement

ಪಕ್ಷ ಬಲವರ್ಧನೆಗೆ ಶ್ರಮಿಸಿ: ಮನೋಜ್‌ ಬೆಟ್ಟಗೆರೆ

09:54 AM Jul 04, 2020 | Suhan S |

ಕೊಟ್ಟಿಗೆಹಾರ: ತಳ ಮಟ್ಟದಿಂದ ಪಕ್ಷದ ಬಲವರ್ಧನೆಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮನೋಜ್‌ ಬೆಟ್ಟಗೆರೆ ಹೇಳಿದರು.

Advertisement

ಬೆಟ್ಟಗೆರೆಯಲ್ಲಿ ಗುರುವಾರ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಡೆದ ಕೆಪಿಸಿಸಿ ನೂತನ ಅಧ್ಯಕ್ಷರ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ವಿಡಿಯೋ ಕಾನ್ಫರೆನ್ಸ್‌ ಹಾಗೂ ಪ್ರತಿಜ್ಞಾ ವಿಧಿ  ಕಾರ್ಯಕ್ರಮದಲ್ಲಿ ಮಾತನಾಡಿದರು. ಆಡಳಿತ ಪಕ್ಷದ ವೈಫಲ್ಯಗಳನ್ನು ಜನತೆಯ ಮುಂದಿಡುವ ಕಾರ್ಯವಾಗಬೇಕಿದೆ. ಡಿ.ಕೆ ಶಿವಕುಮಾರ್‌ ಅವರು ಕೆಪಿಸಿಸಿ ನೂತನಅಧ್ಯಕ್ಷರಾಗಿದ್ದು ಪಕ್ಷದ ಕಾರ್ಯಕರ್ತರಿಗೆ ಹೊಸ ಉತ್ಸಾಹ ಬಂದಂತಾಗಿದೆ. ಅವರ ನಿರ್ಧಾರಕ್ಕೆ ಬದ್ಧರಾಗಿ ಎಲ್ಲರೂ ಕಾರ್ಯ ನಿರ್ವಹಿಸಬೇಕಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಬಣಕಲ್‌ ಹೋಬಳಿ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಪೆಟ್ರೋಲ್‌ ಡಿಸೇಲ್‌ ಬೆಲೆ ದಿನದಿಂದ ದಿನಕ್ಕೆ ಗಗನಕೇರುತ್ತಿದೆ ಎಂದರು. ಕಾಂಗ್ರೆಸ್‌ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೊತ್ತಮ್‌ ಚಿತ್ತಾಪುರ್‌ ಮಾತನಾಡಿ, ಕೋವಿಡ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದರು. ಬೆಟ್ಟಗೆರೆ ಮತ್ತು ಬಣಕಲ್‌ ನಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು. ಪಕ್ಷದ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಯತೀಶ್‌ ಬಿ.ಆರ್‌, ಬಿ.ಎಲ್‌. ದಿನೇಶ್‌, ಲಾಯಕ್‌ ಅಲಿಖಾನ್‌, ಮಹೇಶ್‌ಗೌಡ, ಬಿ.ಎಂ ಹರೀಶ್‌, ಉಮರ್‌, ಅರವಿಂದ್‌, ರಮೇಶ್‌, ಶೇಖರೆಗೌಡ, ಸಿ.ಎಸ್‌. ವಿನಯ್‌ಕುಮಾರ್‌, ಪಯಾಸ್‌ ಅಲಿಖಾನ್‌, ಬಿ.ಕೆ ನಾಗೇಶ್‌ಗೌಡ, ರುದ್ರಯ್ಯ, ಅಹಮದ್‌ ಭಾವ, ಚಂದ್ರಯ್ಯ, ಚಂದ್ರಪ್ಪ, ಮಂಜಯ್ಯ, ಮಂಜುನಾಥ್‌, ಮಾಜಿ ತಾಪಂ ಸದಸ್ಯ ಸಬ್ಲಿ ದೇವರಾಜ್‌, ಗ್ರಾಪಂ ಸದಸ್ಯರಾದ ಇಪ್ರಾನ್‌, ದಿಲ್‌ದಾರ್‌ ಬೇಗಂ, ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next