Advertisement

ಪದಗ್ರಹಣ ನೇರಪ್ರಸಾರ ಯಶಸ್ಸಿಗೆ ಶ್ರಮಿಸಿ

06:15 AM May 31, 2020 | Team Udayavani |

ಹುಬ್ಬಳ್ಳಿ: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಜೂ. 7ರಂದು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ ಅವರು ಅಧಿಕಾರ ಸ್ವೀಕಾರ ಮಾಡುತ್ತಿದ್ದು, ಅವಳಿನಗರದಲ್ಲಿ ಸಮಾರಂಭದ ನೇರಪ್ರಸಾರ ಯಶಸ್ಸಿಗೆ ಪಕ್ಷದ ಎಲ್ಲ ಬ್ಲಾಕ್‌ ಹಾಗೂ ವಾರ್ಡ್‌ ಅಧ್ಯಕ್ಷರು ಶ್ರಮಿಸುವಂತೆ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Advertisement

ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಬ್ಲಾಕ್‌ ಮಟ್ಟದ ಅಧ್ಯಕ್ಷರೊಂದಿಗೆ ಶನಿವಾರ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಯಾ  ವಾರ್ಡ್‌ ಹಾಗೂ ಬ್ಲಾಕ್‌ ಮಟ್ಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಟಿವಿ ಪರದೆ ಮೂಲಕ ನೇರಪ್ರಸಾರ ವೀಕ್ಷಣೆ ಮಾಡಬೇಕಿದೆ. ಪ್ರತಿ ವಾರ್ಡ್‌ಗೆ ಕನಿಷ್ಠ 1 ಕಾರ್ಯಕ್ರಮ ಆಯೋಜಿಸುವ ಮಹತ್ತರ ಜವಾಬ್ದಾರಿ ಎಲ್ಲ ಬ್ಲಾಕ್‌ ಹಾಗೂ ವಾರ್ಡ್‌ ಅಧ್ಯಕ್ಷರ ಮೇಲಿದೆ. ಸೋಮವಾರದೊಳಗೆ ಪ್ರತಿ ವಾರ್ಡ್‌ ನಲ್ಲಿ ಹಮ್ಮಿಕೊಳ್ಳಬಹುದಾದ ಜಾಗದ ಬಗ್ಗೆ ವರದಿ ನೀಡುವಂತೆ ಬ್ಲಾಕ್‌ ಅಧ್ಯಕ್ಷರಿಗೆ ಸೂಚಿಸಿದರು.

ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮಾತನಾಡಿ, ಕಾರ್ಯಕ್ರಮದ ಸ್ಥಳದಲ್ಲಿ ಸ್ಯಾನಿಟೈಸರ್‌ ಇರಿಸುವುದು, ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದರು. ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು, ಇಸ್ಮಾಯಿಲ್‌ ತಮಟಗಾರ, ಮಹಾನಗರ ಜಿಲ್ಲಾ ವ್ಯಾಪ್ತಿಯ 6 ಬ್ಲಾಕ್‌ ಅಧ್ಯಕ್ಷರಾದ ಮೆಹಮೂದ್‌ ಕೋಳೂರು, ದಶರಥ ವಾಲಿ, ಬಸವರಾಜ ಕಿತ್ತೂರು, ಸಾಗರ ಹಿರೇಮನಿ, ಬಸವರಾಜ ಮಲಕಾರಿ, ಅಬ್ದುಲ್‌ ಗಣಿ ವಲಿಅಹ್ಮದ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next