Advertisement

LS polls; ಊಹಾಪೋಹಗಳಿಗೆ ಪ್ರತಿಕ್ರಿಯಿಸುವುದಿಲ್ಲ,ಪಕ್ಷ ಹೇಳಿದ್ದನ್ನು ಮಾಡುತ್ತೇನೆ:ಅಣ್ಣಾಮಲೈ

05:21 PM Mar 01, 2024 | Team Udayavani |

ಚೆನ್ನೈ: ”ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಎನ್ನುವುದು ‘ಊಹಾಪೋಹ’, ಆದರೆ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ” ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಶುಕ್ರವಾರ ಹೇಳಿದ್ದಾರೆ.

Advertisement

“ಪಕ್ಷ ಏನು ಹೇಳಿದರೂ ನಾನು ಪಾಲಿಸಬೇಕು, ಅದು ಪಕ್ಷದ ಸ್ವಭಾವ. ಇಂದು ಪಕ್ಷವು ರಾಜ್ಯ ಮಟ್ಟದ ಎನ್ ಮಣ್ ಎನ್ ಮಕ್ಕಳ್ ಯಾತ್ರೆಯನ್ನು ಪೂರ್ಣಗೊಳಿಸಲು ನನ್ನನ್ನು ಕೇಳಿತ್ತು, ನಾವು ಅದನ್ನು ಮುಗಿಸಿದ್ದೇವೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯ ಬಗ್ಗೆ ಬಿಜೆಪಿ ನನಗೆ ಕೆಲವು ಜವಾಬ್ದಾರಿಯನ್ನು ನೀಡಿದೆ ಮತ್ತು ಅವರು ಅದನ್ನು ಮಾಡುತ್ತಿದ್ದೇವೆ” ಎಂದರು.

ಮುಂಬರುವ ಲೋಕಸಭೆ ಸ್ಪರ್ಧೆ ವಿಚಾರವನ್ನು ಉಲ್ಲೇಖಿಸಿ, “ನಾಳೆ ಬೆಳಗ್ಗೆ ಪಕ್ಷ ನನಗೆ ಹೇಳಿದರೆ ನಾನು ಅದನ್ನು ಮಾಡುತ್ತೇನೆ. ಊಹಾಪೋಹಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನಮ್ಮ ಹಿರಿಯ ರಾಷ್ಟ್ರೀಯ ನಾಯಕತ್ವವು ಏನೇ ನಿರ್ಧರಿಸಿದರೂ ಅದನ್ನು ಪಾಲಿಸುವುದು ಮತ್ತು ಅದನ್ನು ನೆಲದ ಮೇಲೆ ಜಾರಿಗೆ ತರುವುದು ನನ್ನ ಕರ್ತವ್ಯವಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next