Advertisement

“ಸತ್ಯಕ್ಕೆ ಬೆನ್ನು ಮಾಡದ ಛಲವಾದಿ ನನ್ನಣ್ಣ’; Priyanka Gandhi Vadra

07:30 PM Apr 10, 2023 | Team Udayavani |

ನವದೆಹಲಿ: “ಅನ್ಯಾಯವನ್ನೂ ಘನತೆಯಿಂದಲೇ ಎದುರಿಸಿ, ಸತ್ಯಕ್ಕೆ ಎಂದಿಗೂ ಬೆನ್ನು ತೋರದೆ ಮುನ್ನುಗ್ಗುವ ನನ್ನ ಸಹೋದರನ ಬಗ್ಗೆ ನನಗೆ ಹೆಮ್ಮೆ ಇದೆ’. ಹೀಗೆ ಹೇಳಿದ್ದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ.

Advertisement

ಒಡಹುಟ್ಟಿದವರ ದಿನ (ಸಿಬ್ಲಿಂಗ್ಸ್‌ ಡೇ) ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಅವರು ರಾಹುಲ್‌ ಅವರ ಜತೆಗಿನ ತಮ್ಮ ಚಿತ್ರಪಟವೊಂದನ್ನು ಹಂಚಿಕೊಂಡಿದ್ದಾರೆ.

ಅದಕ್ಕೆ ಕ್ಯಾಪ್ಶನ್‌ ನೀಡಿರುವ ಅವರು, “ಇಂದು ಒಡಹುಟ್ಟಿದವರ ದಿನ.. ತನ್ನ ವಿರುದ್ಧ ಕೆಟ್ಟದ್ದನ್ನೇ ಎಸೆದರೂ ಒಳ್ಳೆಯದನ್ನೇ ಬಯಸುವ ಸಹಾನುಭೂತಿ ಹಾಗೂ ತನ್ನ ಬೆನ್ನಿಗೆ ಚೂರಿ ಇರಿದು, ಮೌನಗೊಳಿಸಲು ಏನೇ ಅಧಿಕಾರ ಬಳಸಿದರೂ ಹೆದರದೇ ಘನತೆಯಿಂದಲೇ ಎಲ್ಲವನ್ನೂ ಎದುರಿಸಿ ಸತ್ಯದ ಪರ ನಿಲ್ಲುವ ಛಲವಾದಿಯಾಗಿರುವ ನನ್ನ ಏಕೈಕ ಸಹೋದರನಿಗೆ ಶುಭಾಶಯ ತಿಳಿಸುತ್ತೇನೆ.

ಆತನನ್ನು ಸಹೋದರನಾಗಿ ಪಡೆದ ಬಗ್ಗೆ ನನಗೆ ಸದಾ ಹೆಮ್ಮೆ ಇದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next