Advertisement

ಡಿಕೆಶಿ ಔತಣಕೂಟಕ್ಕೆ ಹೋಗಲ್ಲ, ಹೋಗಲ್ಲ,ಹೋಗಲ್ಲ !: ರಮೇಶ್‌ ಜಾರಕಿಹೊಳಿ

04:40 PM Dec 18, 2018 | Team Udayavani |

ಬೆಳಗಾವಿ: ಕಾಂಗ್ರೆಸ್‌ ಪಕ್ಷದಲ್ಲಿ ತೀವ್ರ ಅಸಮಾಧಾನ ಹೊಗೆಯಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮಂಗಳವಾರ ಹಲವು ವಿದ್ಯಮಾನಗಳು ನಡೆದಿವೆ. ಒಂದೆಡೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಹಲವು ಪ್ರಮುಖ ನಾಯಕರು ಗೈರಾಗಿದ್ದಾರೆ. ಇನ್ನೊಂದೆಡೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ಕರೆದಿರುವ ಔತಣಕೂಟದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ.

Advertisement

ಸುದ್ದಿಗಾರರು ಪ್ರಶ್ನಿಸಿದಾಗ ನನಗೆ ಅನಾರೋಗ್ಯ ಇತ್ತು ಹಾಗಾಗಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದರು. ಡಿ.ಕೆ.ಶಿವಕುಮಾರ್‌ ಅವರು ಇಂದು ರಾತ್ರಿ ಕರೆದಿರುವ ಔತಣಕೂಟಕ್ಕೆ ತೆರಳುತ್ತೀರಾ ಎಂದು ಪ್ರಶ್ನಿಸಿದಾಗ ಹೋಗಲ್ಲ,ಹೋಗಲ್ಲ, ಹೋಗಲ್ಲ ಎಂದು ಮೂರು ಬಾರಿ ಹೇಳಿದರು.

ಡಿಸೆಂಬರ್‌ 22 ರಂದು ಸಂಪುಟ ವಿಸ್ತರಣೆಗೆ ಕಸರತ್ತು ಮುಂದುವರಿದಿದ್ದು ಕಾಂಗ್ರೆಸ್‌ನಲ್ಲಿ ಯಾವ ಬೆಳವಣಿಗೆಗಳು ನಡೆಯುತ್ತದೆ ಎನ್ನುವುದನ್ನು ಕಾದು  ನೋಡಬೇಕು. 

Advertisement

Udayavani is now on Telegram. Click here to join our channel and stay updated with the latest news.

Next