Advertisement

ಅಪಘಾತದಲ್ಲಿ ಮಡಿದ ಮಹಿಳೆಯರ ಸಾಮೂಹಿಕ ಪುಣ್ಯತಿಥಿ

12:03 PM Jan 24, 2021 | Team Udayavani |

ಧಾರವಾಡ: ಹು-ಧಾ ಬೈಪಾಸ್‌ ರಸ್ತೆಯ ಇಟಿಗಟ್ಟಿ ಬಳಿ ಜ. 15ರಂದು ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ 11 ಜನರಿಗೆ ಕೆಲಗೇರಿ ಹಾಗೂ ಸುತ್ತಲಿನ ಬಡಾವಣೆಗಳ ಗ್ರಾಮಸ್ಥರು ಶನಿವಾರ ಸಾಮೂಹಿಕ ಪುಣ್ಯತಿಥಿ ಆಚರಿಸಿ ಗಮನ ಸೆಳೆದರು.

Advertisement

ಅಪಘಾತ ಸಂಭವಿಸಿ ಶನಿವಾರಕ್ಕೆ ಒಂಬತ್ತು ದಿನ. ಈ ಹಿನ್ನೆಲೆಯಲ್ಲಿ ಸಾಮೂಹಿಕ ಪುಣ್ಯತಿಥಿ ನೆರವೇರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಕೆಲಗೇರಿ ಬೈಪಾಸ್‌ ರಸ್ತೆಯ ಬದಿ ಮೃತರ ಭಾವಚಿತ್ರದೊಂದಿಗೆ ಒಂದು ನಿಮಿಷ ಮೌನಾಚರಣೆ ಮಾಡಿ, ನೈವೇದ್ಯ ಮಾಡಿ ಪುಣ್ಯತಿಥಿ ಸಂದರ್ಭದಲ್ಲಿ ನಡೆಯುವ ಎಲ್ಲ ರೀತಿಯ ಪೂಜೆಗಳನ್ನು ಮಾಡಲಾಯಿತು.

ಇದನ್ನೂ ಓದಿ:ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ : ಸೈಫ್ ಅಲಿಖಾನ್‌ ಸೇರಿ 5 ಮಂದಿ ವಿರುದ್ಧ ಕೇಸ್‌

ಈ ರಸ್ತೆಯಲ್ಲಿ ಮುಂದೆ ಅಪಘಾತಗಳು ಆಗದಂತೆ ಶಾಂತಿ ಮಾಡಲಾಗಿದೆ. ಜೊತೆಗೆ ಸರ್ಕಾರ ಎಚ್ಚೆತ್ತುಕೊಂಡು ಇನ್ನಾದರೂ ಈ ರಸ್ತೆ ಅಗಲೀಕರಣ ಕಾರ್ಯ ಮಾಡಲಿ ಎನ್ನುವುದು ನಮ್ಮ ಉದ್ದೇಶ ಎಂದು ಕೆಲಗೇರಿಯ ಗ್ರಾಮಸ್ಥ ಮಂಜುನಾಥ ಹೇಳಿದರು. ಬಸವರಾಜ ಕೊರವರ, ರುದ್ರಯ್ಯ ಕಲ್ಮಠ, ನಾಗೇಶ ತಲವಾಯಿ, ಬಸಯ್ಯ ಹಿರೇಮಠ, ಗಿರೀಶ ಪೂಜಾರ, ಮಲ್ಲಯ್ಯ ಹೊಂಗಲಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next