Advertisement

ರಮೇಶ್ ಜಾರಕಿಹೊಳಿಯವರೇ ಸಿಡಿ ರಿಲೀಸ್ ಮಾಡಿದ್ದಾರೆ : ಸಂತ್ರಸ್ತೆ

11:41 PM Mar 13, 2021 | Team Udayavani |

ಬೆಂಗಳೂರು : ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ವಿಡಿಯೋದಲ್ಲಿರುವ ಯುವತಿ ಸ್ಪಷ್ಟನೆ ನೀಡಿದ್ದಾರೆ.

Advertisement

ವಿಡಿಯೋ ಮೂಲಕ ಹೇಳಿರುವ ಸಂತ್ರಸ್ತೆ, ನಮ್ಮ ಮಾನ ಮರ್ಯಾದೆ ಹೋಗಿದೆ, ರಮೇಶ್ ಅವರೇ ಈ ಸಿಡಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.

‘ಗೃಹ ಸಚಿವ ಬಸವರಾಜು ಬೊಮ್ಮಾಯಿಯವರಿಗೆ ನಾನು ಇಷ್ಟೇ ಕೇಳಿ ಕೊಳ್ಳುವುದು. ಈ ವಿಡಿಯೋವನ್ನು ಹೇಗೆ ಮಾಡಿದ್ರು ಗೊತ್ತಿಲ್ಲ. ಆದ್ರೆ ನಮ್ಮ ಮಾನ ಮರ್ಯಾದೆ ಹೋಗಿದೆ. ನಮಗೆ ರಾಜಕೀಯ ಬೆಂಬಲ ಇಲ್ಲ. ಈ ಸುದ್ದಿಯಿಂದ ನಮ್ಮ ಮನೆಯ ಬಳಿ ಜನರು ಬಂದು ಹೋಗುತ್ತಿದ್ದಾರೆ. ನಮ್ಮ ತಂದೆ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದೆ.

ರಮೇಶ್ ಜಾರಕಿಹೊಳಿ ಕೆಲಸ ಕೊಡಿಸುತ್ತೇನೆ ಅಂತ ಹೇಳಿದ್ರು. ಇದೀಗ ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ ನನಗೆ ಯಾವುದೇ ರಕ್ಷಣೆ ಇಲ್ಲ. ನನಗೆ ರಕ್ಷಣೆ ಕೊಡಿ ಎಂದು ಯುವತಿ ಹೇಳಿಕೊಂಡಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next